ಮಹೇಶ್‌ ಟೆಂಗಿನಕಾಯಿ ಪರ ನಟ ಸುದೀಪ್‌ ಭರ್ಜರಿ ರೋಡ್‌ ಶೋ

ಹೊಸದಿಗಂತ ವರದಿ ಹುಬ್ಬಳ್ಳಿ:

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಅಭ್ಯರ್ಥಿಗಳ ಮತಬೇಟೆ ಶುರುವಾಗಿದೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆಯಲು ಸೆಲೆಬ್ರೆಟಿಗಳನ್ನು ಕರೆತಂದಿದ್ದು, ಇಂದು ವಾಣಿಜನಗರಿ ಹುಬ್ಬಳ್ಳಿಯ ದೇವಾಂಗಪೇಟೆ- ಗೋಪನಕೊಪ್ಪದಲ್ಲಿ ಶುಕ್ರವಾರ ನಟ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರಮತಯಾಚನೆ ಮಾಡಿದರು.

ಸುದೀಪ್ ರೋಡ್ ಶೋ ಕಾರಣಕ್ಕೆ ಅವರ ಸಾವಿರಾರು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ರಸ್ತೆಯುದ್ದಕ್ಕೂ ನಿಂತು ಬಿಜೆಪಿ ಹಾಗೂ ನಟ ಸುದೀಪ್ ಅವರ ಪರ ಘೋಷಣೆ ಕೂಗಿದರು.

ನಟ ಸುದೀಪ್ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಜೊತೆಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ನಂತರ ಅಳ್ನಾವರಕ್ಕೆ ತೆರಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!