ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ನಟಿ ಸಪ್ತಮಿ ಗೌಡ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನಲ್ಲಿ ಕಟೀಲು ದುರ್ಗಾಪರಮೇಶ್ವರಿ ತಾಯಿಯ ದರ್ಶನ ಪಡೆದರು. ನಟ ಸನಿಲ್ ಗುರು, ತಾಯಿಯೊಂದಿಗೆ ಆಗಮಿಸಿದ ಸಪ್ತಮಿ ಗೌಡ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಳದ ವತಿಯಿಂದ ನಟಿಯಿಂದ ಶೇಷ ವಸ್ತ್ರ ಹಾಗೂ ಪ್ರಸಾದ ನೀಡಿ ಗೌರವಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ಕಾಂತಾರ ಸಿನಿಮಾ ಯಶಸ್ಸು ತಂದುಕೊಟ್ಟಿದ್ದು ಬಹಳ ಸಂತೋಷವಾಗಿದ್ದು, ಇನ್ನು ಹೆಚ್ಚೆಚ್ಚು ಕನ್ನದಡ ಸಿನಿಮಾ ಮಾಡಬೇಕೆಂದಿದ್ದೇಮೆ. ತುಳು ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಕ್ರೆ ಖಂಡಿತಾ ನಟಿಸುವುದಾಗಿ ತಿಳಿಸಿದರು. ಇದೀಗ ಈ ಸಿನಿಮಾ ಯಶಸ್ಸಿನಿಂದ ಹಲವು ಆಫರ್ಗಳು ಬರುತ್ತಿದೆ ಆ ಬಗ್ಗೆ ಮಾತುಕುತೆ ನಡೆಯುತ್ತಿರುವುದಾಗಿ ತಿಳಿಸಿದರು. ಅಂದರೆ, ಕಾಂತಾರದಿಂದ ನಟಿಯ ನಸೀಬೆ ಬದಲಾದಂತಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಕನ್ನಡದ ಬೆಡಗಿ ಬ್ಯುಸಿಯಾಗ್ತಾರಾ ನೋಡಬೇಕು.
ಇನ್ನೂ ದೇವಳಕ್ಕೆ ಬಂದ ಮೂಗುತಿ ಸುಂದರಿ ಕಂಡ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳು ಮುಗಿಬಿದ್ದರು.