ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದಲ್ಲಿ ಅಫ್ತಾಬ್ನನ್ನು ವಿಚಾರಣೆಗೊಳಪಡಿಸಿದ್ದು, ತಿಂಗಳ ಆರಂಭದಲ್ಲಿ ವಿಚಾರಣೆಗೊಳಪಡಿಸಿದಾಗ ಆತನ ಮುಖದಲ್ಲಿ ಪಶ್ಚಾತ್ತಾಪದ ಛಾಯೆಯೇ ಇರಲಿಲ್ಲ. ಆತ ಬಹಳ ಆತ್ಮವಿಶ್ವಾಸದಲ್ಲಿದ್ದ ಎಂದು ಮಹಾರಾಷ್ಟ್ರದ ಮಣಿಕ್ಪುರ ಪೊಲೀಸರು ಹೇಳಿದ್ದಾರೆ.
ಶ್ರದ್ಧಾ ವಾಲ್ಕರ್ ಕುಟುಂಬದವರು ಶ್ರದ್ಧಾ ಸಂಪರ್ಕಕ್ಕೆ ಸಿಗದಿದ್ದಾಗ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆ ವೇಳೆ ಮಣಿಕ್ಪುರ್ ಪೊಲೀಸರು ಅಫ್ತಾಬ್ನನ್ನು ವಿಚಾರಣೆಗೆ ಕರೆದಿದ್ದರು. ಶ್ರದ್ಧಾ ನನ್ನನ್ನು ಬಿಟ್ಟುಹೋಗಿದ್ದಾಳೆ, ನಾವು ಒಟ್ಟಿಗೇ ಇಲ್ಲ ಎಂದಷ್ಟೇ ಹೇಳಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ನಲ್ಲಿ ಮೊದಲ ಬಾರಿಗೆ ಅಫ್ತಾಬ್ ವಿಚಾರಣೆ ನಡೆಸಲಾಗಿತ್ತು. ಯದನಂತರ ನವೆಂಬರ್ನಲ್ಲಿ ಒಮ್ಮೆ ಎರಡು ಪುಟಗಳ ಹೇಳಿಕೆ ದಾಖಲಿಸಲಾಗಿತ್ತು. ಈ ಎರಡೂ ಬಾರಿ ಅಫ್ತಾಬ್ ಮುಖದಲ್ಲಿ ಯಾವುದೇ ಪಶ್ಚಾತ್ತಾಪ ಕಾಣಲಿಲ್ಲ. ತುಂಬಾ ಆತ್ಮವಿಶ್ವಾಸದಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.