ಅಧ್ಯಾತ್ಮದ ಕಡೆಗೆ ನಟಿ ತಮನ್ನಾ ಭಾಟಿಯಾ ಮನಸ್ಸು: ಈ ಕುರಿತು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ನಟಿ ತಮನ್ನಾ ಭಾಟಿಯಾ ಅವರ ಮನಸ್ಸು ಅಧ್ಯಾತ್ಮದ ಕಡೆಗೆ ವಾಲಿದೇಯಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಇದಕ್ಕೆ ಕಾರಣ ಅವರು ಪಿಸೊಟ್ ಮಾಡಿರುವ ಚಿತ್ರಗಳು.

ಸದಾ ಗ್ಲಾಮರಸ್​ ಆಗಿ ಪೋಸ್​ ನೀಡುವ ತಮನ್ನಾಏಕಾಏಕಿ ಕಾವಿ ಧರಿಸಿ ಬಂದಿದ್ದಾರೆ. ಭಕ್ತಿ ಭಾವದಿಂದ ಪೂಜೆ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಅದನ್ನು ಕಂಡು ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

ಅವರು ಲಿಂಗ ಭೈರವಿ ದೇವಿಯ ಆರಾಧಿಸಲು ಶುರು ಮಾಡಿದ್ದಾರೆ. ತಮ್ಮ ಮನೆಯಲ್ಲೂ ಲಿಂಗ ಭೈರವಿ ದೇವಿಯ ವಿಗ್ರಹವನ್ನು ಇಟ್ಟುಕೊಂಡು ಅವರು ಪೂಜಿಸುತ್ತಿದ್ದಾರೆ.

ಈ ಕುರಿತು ಅವರು ಮಾತನಾಡಿದ್ದು, ಕೇವಲ ಲಿಂಗ ಭೈರವಿ ವಿಗ್ರಹವನ್ನು ಮನೆಗೆ ತೆಗೆದುಕೊಂಡು ಹೋಗುವುದಷ್ಟೇ ಮುಖ್ಯವಲ್ಲ. ಆ ದೇವರ ಗುಣಗಳನ್ನು ಅವಳಡಿಸಿಕೊಳ್ಳುವುದು ಮುಖ್ಯ ಎಂದು ತಮನ್ನಾ ಹೇಳಿದ್ದಾರೆ.

‘ಜೀವನದಲ್ಲಿನ ಭಯಗಳನ್ನು ಲಿಂಗ ಭೈರವಿ ದೂರ ಮಾಡುತ್ತಾಳೆ. ಅನೇಕ ಬಾರಿ ಅದು ನನ್ನ ಅನುಭವಕ್ಕೆ ಬಂದಿದೆ. ಏನನ್ನಾದರೂ ಮಾಡುವಾಗ ಭಯ ಆಗಿದ್ದುಂಟು. ಆದರೆ ದೇವಿಯ ಕ್ಷೇತ್ರಕ್ಕೆ ಬಂದಾಗ ಆ ಭಯದಿಂದ ಹೊರಬರುವ ಶಕ್ತಿ ನನ್ನೊಳಗೆ ಮೂಡುತ್ತದೆ’ ಎಂದು ತಮನ್ನಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!