2024ರ ನಂತರ ನಿಮ್ಮನ್ನೂ ತನಿಖೆ ಮಾಡ್ತೇವೆ- ಶಿವಸೇನೆಯ ಸಂಜಯ ರಾವತ್ ಧಮಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿದ ಬೆನ್ನಲ್ಲೇ, ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿ ವಿರೋಧಿಗಳನ್ನು ಮಟ್ಟ ಹಾಕಲು ಮಾಫಿಯಾದಂತೆ ಅಖಾಡಕ್ಕಿಳಿದಿವೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಇಡಿ ಅಧಿಕಾರಿಗಳು ಮಲಿಕ್ ಅವರನ್ನು ವಿಚಾರಣೆಗಾಗಿ ಅವರ ಮನೆಯಿಂದ ಕರೆದೊಯ್ದರು. ಒಬ್ಬ ಸಚಿವನನ್ನು ಕೇಂದ್ರ ಸಂಸ್ಥೆಗಳು ನಮ್ಮ ರಾಜ್ಯಕ್ಕೆ ಬಂದು ಕರೆದುಕೊಂಡು ಹೋಗುತ್ತವೆ. 2024 ರ ನಂತರ, ನಿಮ್ಮನ್ನೂ ತನಿಖೆಗೆ ಒಳಪಡಿಸಲಾಗುತ್ತದೆ ಇದನ್ನೂ ನೆನಪಿನಲ್ಲಿಡಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!