ರಾಜ್ಯ ಬಜೆಟ್‌| ಕೃಷಿಯಲ್ಲಿ ರೈತರಿಗೆ ಸಿಕ್ಕಿದ್ದೇನು? ಪೂರಕ ವಿಷಯಗಳಾವುವು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ಬಾರಿ ರಾಜ್ಯ ಬಜೆಟ್‌ನಲ್ಲಿ ರೈತರಿಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಬಂಪರ್ ಆಫರ್‌ ಕೊಟ್ಟಿದ್ದಾರೆ. ಸಾಲ ಸೌಲಭ್ಯ ಹೆಚ್ಚಳ ಮಾಡುವುದರೊಂದಿಗೆ. ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಕೂಡ ಘೋಷಣೆ ಮಾಡಲಾಗಿದೆ. ನೀರಾವರಿಗೂ ಹೆಚ್ಚಿನ ಸವಲತ್ತು ಕೊಟ್ಟಿದ್ದು, ವಿಶೇಷ ಅನುದಾನ ಘೋಷಿಸಲಾಗಿದೆ.

  • ಈ ವರ್ಷದಿಂದ ರೈತರಿಗೆ ನೀಡುವ ಬಡ್ಡಿ ರಹಿತ ಸಾಲದ ಮಿತಿಯನ್ನು ₹3 ಲಕ್ಷಗಳಿಂದ ₹ 5 ಲಕ್ಷಗಳಿಗೆ ಹೆಚ್ಚಳ
  • 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ₹ 25,000 ಕೋಟಿಗಳಷ್ಟು ಸಾಲ ವಿತರಣೆ
  • ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ʻಭೂಸಿರಿʼ ಯೋಜನೆಯಡಿ ₹ 10 ಸಾವಿರ ಹೆಚ್ಚುವರಿ ಸಹಾಯ ಧನ
  •  ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮುಂತಾದ ಪರಿಕರಗಳಿಗೆ ₹ 962 ಕೋಟಿ ವೆಚ್ಚ
  • ನೀರಾವರಿ ಪಂಪ್‌ಸೆಟ್‌ಗಳಿಗೆ ₹ 52,590 ಕೋಟಿ ವಿದ್ಯುತ್‌ ಸಹಾಯ ಧನ
  • ಫಸಲ್ ಬಿಮಾ ಯೋಜನೆಯಡಿ 86 ಲಕ್ಷ ರೈತರ ಬೆಳೆ ವಿಮೆಗಾಗಿ ₹ 4,900 ಕೋಟಿ ಪ್ರೀಮಿಯಂ ಪಾವತಿ
  • ಭತ್ತ, ರಾಗಿ, ಜೋಳ, ಹೆಸರು ಕಾಳು ಮತ್ತು ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗಾಗಿ ₹ 6,650 ಕೋಟಿ ಅನುದಾನ
  •  56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ ₹180 ಕೋಟಿ ವೆಚ್ಚದಲ್ಲಿ ಜೀವನ್‌ ಜ್ಯೋತಿ ವಿಮಾ
  •  ಕಳೆದ ವರ್ಷ ಘೋಷಿಸಿದ ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ ₹ 400 ಕೋಟಿ ಅನುದಾನ
  •  ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಲು ₹ 2,037 ಕೋಟಿ
  • ಬೆಳೆಗಳ ಸಂಸ್ಕರಣೆ, ಶೇಖರಣೆಗಾಗಿ 10.45 ಲಕ್ಷ ಫಲಾನುಭವಿಗಳಿಗೆ ₹ 175 ಕೋಟಿ ನೆರವು
  •  ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿ ₹ 5,245 ಕೋಟಿ ಘೋಷಣೆ
  •  ಕೃಷಿ ಮತ್ತು ತೋಟಗಾರಿಕೆಯಲ್ಲಿ ಹನಿ ನೀರಾವರಿಗಾಗಿ ₹ 2,900 ಕೋಟಿಗೆ ಮಾರುಕಟ್ಟೆ ನೆರವು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!