ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಬಜೆಟ್ ಮಂಡನೆ ಮುಕ್ತಾಯವಾಗಿದ್ದು, ಇದೊಂಥರಾ ಬಿಸಿಲು ಕುದುರೆ ರೀತಿ ಬಜೆಟ್ ಆಗಿದೆ, ಇದು ಯಾರ ಕೈಗೂ ಸಿಗೋದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ನಿಂತು ಹೊಗೆ ಬರ್ತಾ ಇದೆ, ಆದರೂ ಯಾರಿಗೂ ಚಿಂತೆ ಇಲ್ಲ. ನಾನೂ ಬಜೆಟ್ ಮಂಡನೆ ಮಾಡಿದ್ದೇನೆ ಅಂತ ಸಿಎಂ ಖುಷಿಯಾಗಬೇಕಷ್ಟೆ. ಇದರ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು, ಜಾತ್ರೆ ಕನ್ನಡಕ ಹಾಕಿಕೊಂಡು ನೋಡಬಹುದಷ್ಟೆ ಎಂದಿದ್ದಾರೆ.