ಪುನೀತ್ ಮನೆಗೆ ಅಲ್ಲು ಅರ್ಜುನ್ ಭೇಟಿ, ಕುಟುಂಬದವರಿಗೆ ಸಾಂತ್ವಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಪುನೀತ್ ರಾಜ್‌ಕುಮಾರ್ ಮನೆಗೆ ನಟ ಅಲ್ಲು ಅರ್ಜುನ್ ಇಂದು ಭೇಟಿ ನೀಡಲಿದ್ದಾರೆ.
ಸದಾಶಿವನಗರದ ಪುನೀತ್ ಅವರ ಮನೆಗೆ ಇಂದು ಅಲ್ಲು ಅರ್ಜುನ್ ಭೇಟಿ ನೀಡಲಿದ್ದು, ಕುಟುಂಬದವರಿಗೆ ಸಾಂತ್ವಾನ ಹೇಳಲಿದ್ದಾರೆ. ನಂತರ ಪುನೀತ್ ಸಮಾಧಿಗೆ ತೆರಳಿ ನಮನ ಸಲ್ಲಿಸಲಿದ್ದಾರೆ. ಪುನೀತ್ ಜೊತೆ ಅಲ್ಲು ಅರ್ಜುನ್‌ಗೆ ಆತ್ಮೀಯ ಒಡನಾಟ ಇತ್ತು. ಪುನೀತ್ ನಿಧನಕ್ಕೆ ಅಲ್ಲು ಅತೀವ ದುಃಖ ವ್ಯಕ್ತಪಡಿಸಿದ್ದರು.

ಈ ಹಿಂದೆಯೇ ಅಲ್ಲು ಪುಷ್ಪ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಆ ವೇಳೆ ಪುನೀತ್ ಮನೆಗೆ ಭೇಟಿ ನೀಡದರೆ, ಅದು ಪ್ರಚಾರ ಎನಿಸುತ್ತದೆ. ಈ ಅಪವಾದ ನನಗೆ ಬೇಡ ಎಂದು ಅಲ್ಲು ಹೇಳಿದ್ದರು. ಪುನೀತ್ ಕುಟುಂಬದವರ ಜೊತೆ ಮಾತನಾಡಲು ಮತ್ತೆ ಬೆಂಗಳೂರಿಗೆ ಬರುತ್ತೇನೆ ಎಂದು ಅಲ್ಲು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!