ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಎರಡೇ ದಿನದಲ್ಲಿ ಗಣೇಶ ಚತುರ್ಥಿ ಸಂಭ್ರಮ ಆರಂಭವಾಗಲಿದ್ದು, ಹುಬ್ಬಳ್ಳಿಯಲ್ಲಿ 12 ಲಕ್ಷ ಮೌಲ್ಯದ ಗಣೇಶನ ಮೂರ್ತಿ ತಯಾರಾಗಿದೆ.
ಕಲಾವಿದ ಮಹೇಶ ಮುರಗೋಡ ಹಾಗೂ ತಂಡ ಅಮೆರಿಕನ್ ಡೈಮಂಡ್ ಹರಳುಗಳನ್ನು ಬಳಸಿ ಅಂದದ ಮೂರ್ತಿ ತಯಾರಿಸಿದ್ದು, ಇಂದು ಮೂರ್ತಿಯನ್ನು ಬೆಂಗಳೂರಿಗೆ ರವಾನಿಸಲಾಗಿದೆ.
ಬೆಂಗಳೂರಿನ ರಾಜಾಜಿನಗರದ ಸ್ವಸ್ತಿಕ ಯುವಕರ ಸಂಘ ಈ ರೀತಿ ಗಣಪನನ್ನು ತಯಾರಿಸಲು ಸೂಚಿಸಿದ್ದು, 150 ಕೆಜಿಯ ಮೂರ್ತಿ ಪ್ರತಿಷ್ಠಾಪನೆಗೆ ತಯಾರಾಗಿದೆ.
ಮುಖವನ್ನು ಬಿಟ್ಟು ಇನ್ನೆಲ್ಲ ಭಾಗಕ್ಕೂ ಅಮೆರಿಕನ್ ಡೈಮಂಡ್ ಹರಳುಗಳನ್ನು ಇಡಲಾಗಿದೆ. ರೈಲಿನಲ್ಲಿ ಗಣಪನ ಮೂರ್ತಿಯನ್ನು ಇಟ್ಟು ಬೆಂಗಳೂರಿಗೆ ಆಗಮಿಸಲಾಗಿದೆ. ಕಳೆದ ವರ್ಷವೂ 60 ಸಾವಿರ ಅಮೆರಿಕನ್ ಡೈಮಂಡ್ ಬಳಸಿ ಮೂರ್ತಿ ನಿರ್ಮಿಸಲಾಗಿತ್ತು.