ಹೊಸದಿಗಂತ ವರದಿ, ಉಡುಪಿ:
ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮುಗೆ ಉಡುಪಿಯ ಲೀಫ್ ಆರ್ಟ್ ಕಲಾವಿದ ಮಹೇಶ್ ಮರ್ಣೆ ಅಶ್ವಥ ಎಲೆಯಲ್ಲಿ ದ್ರೌಪದಿ ಮುರ್ಮು ಅವರ ಚಿತ್ರ ರಚನೆ ಮಾಡಿದ್ದಾರೆ. ಈ ಮೂಲಕ ಉಡುಪಿಯ ಕಲಾವಿದರೊಬ್ಬರು ಅತ್ಯುನ್ನತ ಪದವಿಗೆ ಏರಿದ ದೇಶದ ಪ್ರಥಮ ಪ್ರಜೆಗೆ ಗೌರವ ಅಭಿನಂದನೆ ಸಲ್ಲಿಸಿದ್ದಾರೆ.