ಹೊಸ ದಿಗಂತ ಡಿಜಿಟಲ್ ಡೆಸ್ಕ್
ನೂಪುರ್ ಶರ್ಮ ವಿರುದ್ಧ ಮುಗಿಬೀಳುತ್ತಿರುವ ಆಡಳಿತ ಮತ್ತು ಕಾನೂನು ವ್ಯವಸ್ಥೆಗಳಿಗೆ ಮುಸ್ಲಿಂ ಪಾಳೆಯದಿಂದ ಬರುತ್ತಿರುವ ಪ್ರಚೋದನಕಾರಿ ಹೇಳಿಕೆಗಳ ವಿಚಾರದಲ್ಲಿ ತೀವ್ರತೆ ತೋರುವುದಕ್ಕಾಗುತ್ತಿಲ್ಲವೇ? ಕೈಕಡಿಯುವ ಹೇಳಿಕೆ ಕೊಟ್ಟಿದ್ದ ಮೌಲ್ವಿಯೊಬ್ಬ ಕೇವಲ ಒಂದು ದಿನದಲ್ಲೇ ಜಾಮೀನು ಪಡೆದು ಹೊರಬಂದಿರುವ ಬೆನ್ನಲ್ಲೇ, ಅಜ್ಮೀರ್ ದರ್ಗಾದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನ ದ್ವೇಷಪೂರಿತ ಹೇಳಿಕೆ ವೈರಲ್ ಆಗಿದೆ.
ಟಿವಿ ವಾಹಿನಿಯೊಂದಕ್ಕೆ ಮಾತನಾಡಿರುವ ಸಂದರ್ಭದಲ್ಲಿ ಖಾದಿಮ್ ಸಲ್ಮಾನ್ ಚಿಸ್ತಿ ಎಂಬಾತ ನೂಪುರ್ ಶರ್ಮ ತಲೆ ತಂದುಕೊಟ್ಟವರಿಗೆ ತನ್ನ ಮನೆಯನ್ನೇ ಬರೆದುಕೊಡುವೆ ಎಂದೆಲ್ಲ ಮಾತನಾಡಿದ್ದಾನೆ.
Salman Chishti, the Khadim of Ajmer Dargah releases video calling for beheading of Nupur Sharma, offers to give his house as bounty. https://t.co/2sITw9hfFvpic.twitter.com/02s3ky0Bgi
— Divya Kumar Soti (@DivyaSoti) July 4, 2022
ರಾಜಸ್ಥಾನದ ಹಿಂದುಹತ್ಯೆ ಬೆನ್ನಲ್ಲೇ ಅಜ್ಮೀರ್ ದರ್ಗಾದ ಮುಖ್ಯಸ್ಥ ಜೈನುಲ್ ಅಬೆದಿನ್ ಅಲಿ ಖಾನ್, ಭಾರತವನ್ನು ತಾಲಿಬಾನೀಕರಣ ಮಾಡುವುದಕ್ಕೆ ತಮ್ಮ ವಿರೋಧವಿದೆ ಎಂದು ಘಟನೆಯನ್ನು ಖಂಡಿಸಿದ್ದರು. ರಾಜಕೀರಣಿಗಳು ಸೇರಿದಂತೆ ಬಹಳಷ್ಟು ಹಿಂದುಗಳು ಅಜ್ಮೀರ್ ದರ್ಗಾವು ಸೌಹಾರ್ದತೆ ಸಂಕೇತ ಎಂದು ಚಾದರ ಸಮರ್ಪಿಸುವ ರೂಢಿ ಇದೆ. ಈಗ ಅಲ್ಲಿಂದಲೇ ದ್ವೇಷದ ಹೇಳಿಕೆಗಳು ಬರುತ್ತಿವೆ.