ಕೊಡಗಿನಲ್ಲಿ ಮತ್ತೊಂದು ದುರಂತ.. ವಿದ್ಯುತ್ ಆಘಾತಕ್ಕೆ ಬಲಿಯಾದ ಗರ್ಭಿಣಿ ಕಾಡಾನೆ

ಹೊಸದಿಗಂತ ವರದಿ, ಮಡಿಕೇರಿ:
ವಿದ್ಯುತ್ ಸ್ಪರ್ಶಗೊಂಡು ಎರಡು ಕಾಡಾನೆಗಳು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ದಕ್ಷಿಣ ಕೊಡಗಿನಲ್ಲಿ ನಡೆದಿದೆ.
ದಕ್ಷಿಣಕೊಡಗಿನ ಕುಟ್ಟ ಸಮೀಪದ ಮಂಚಳ್ಳಿ ಕೊರಿಯಮಲೆ ಬೆಟ್ಟದ ಬುಡದಲ್ಲಿರುವ ಬಲ್ಯಮಾಡ ದಿ. ವಿಜಯ ಎಂಬವರ ತೋಟದಲ್ಲಿ 25 ವರ್ಷ ಪ್ರಾಯದ ಗರ್ಭಿಣಿ ಕಾಡಾನೆಯೊಂದು ವಿದ್ಯುತ್ ತಗುಲಿ ಮೃತಪಟ್ಟಿದೆ.
ತೋಟದಲ್ಲಿದ್ದ ಅಡಿಕೆ ಮರವನ್ನು ಬುಧವಾರ ಬೆಳಗಿನ ಜಾವ ಎಳೆದು ತಿನ್ನುವ ಸಂದರ್ಭ ವಿದ್ಯುತ್ ಸ್ಪರ್ಶಗೊಂಡಿರುವುದಾಗಿ ಹೇಳಲಾಗಿದೆ.
ಕಳೆದ ಎರಡು‌ ದಿನಗಳ ಹಿಂದೆಯಷ್ಟೇ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿಯ ಅತ್ತಿಮಂಗಲದಲ್ಲಿ ಎರಡು ಕಾಡಾನೆಗಳು ವಿದ್ಯುತ್ ಆಘಾತಕ್ಕೆ ಸಿಲುಕಿ ಸಾವಿಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!