ಚಕ್ರವರ್ತಿ ಸೂಲಿಬೆಲೆ ವಿರುದ್ಧ ರೊಚ್ಚಿಗೆದ್ದ ಅಪ್ಪು ಫ್ಯಾನ್ಸ್: ಕಾರಣವೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಡಾ.ಪುನೀತ್ ರಾಜ್ ಕುಮಾರ್ ಗೆ ಅಪಮಾನ ಮಾಡುವಂತೆ ಚಕ್ರವರ್ತಿ ಸೂಲಿಬೆಲೆ ಮಾಡಿದ ಟ್ವಿಟ್ಟರ್ ವಿರುದ್ಧ,ಅವರ ಅಪಾರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಹೀಗಾಗಿ ಅಪ್ಪು ಅಭಿಮಾನಿಗಳ ಕ್ಷಮೆಯನ್ನು ಕೂಡ ಚಕ್ರವರ್ತಿ ಸೂಲಿಬೆಲೆ ಕೇಳಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಸಿಎಂ ಬೊಮ್ಮಾಯಿಯವರನ್ನು ತರಾಟೆಗೆ ತೆಗೆದುಕೊಂಡು ಮಾಡಿದ್ದ ಟ್ವಿಟ್ಟರ್ ನಲ್ಲಿ, ಅವರಿಗೆ ಫೈಲ್ ಗೆ ಸಹಿ ಮಾಡೋದಕ್ಕೆ ಸಮಯವಿಲ್ಲ. ಆದ್ರೇ ಎಲ್ಲಾ ಸಿನಿಮಾಗಳ ಪ್ರೀಮಿಯರ್ ಶೋ ನೋಡೋದಕ್ಕೆ ಹೋಗ್ತಾರೆ. ಸಿನಿಮಾ ನಟ ಮೃತಪಟ್ಟಾಗ ಮೂರು ದಿನ ಅಲ್ಲೇ ಇರೋದಕ್ಕೆ ಸಮಯವಿದೆ. ಅಲ್ಲದೇ ಮಂಗಳೂರಿನಲ್ಲಿ ಕೊಲೆ ನಡೆದಿದ್ದರೂ ವಿಕ್ರಾಂತ್ ರೋಣ ಸಿನಿಮಾ ನೋಡಕ್ಕೆ ಹೋಗುತ್ತಾರೆ ಎಂಬುದಾಗಿ ಕಿಡಿಕಾರಿದ್ದರು.

ಈ ಟ್ವಿಟ್ಟರ್ ಗೆ ರೊಚ್ಚಿಗೆದ್ದ ಅಪ್ಪು ಅಭಿಮಾನಿಗಳು ಪುಲ್ ಕ್ಲಾಸ್ ತಗೊಂಡಿದ್ದಾರೆ. ನಿಮ್ಮ ರಾಜಕೀಯಕ್ಕೆ ನಮ್ಮ ಅಪ್ಪು ಹೆಸರು ಬಳಸಿಕೊಂಡಿದ್ದು ಸರಿಯಲ್ಲ ಎಂಬುದಾಗಿ ಕಿಡಿಕಾರಿದ್ದಾರೆ.

ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸಿಡಿದೇಳುತ್ತಿದ್ದಂತೇ, ಪರಿಸ್ಥಿತಿ ಗಂಭೀರತೆಯನ್ನು ಅರಿತಂದ ಚಕ್ರವರ್ತಿ ಸೂಲಿಬೆಲೆಯವರು, ಕೊನೆಗೆ ಈ ಬಗ್ಗೆ ವಿಷಾದ ವ್ಯಕ್ತ ಪಡಿಸಿ, ಕ್ಷಮೆಯಾಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!