ಹೊಸದಿಗಂತ ವರದಿ ಹುಬ್ಬಳ್ಳಿ:
ಕಾಂಗ್ರೆಸ್ನವರು ಕೊರೋನಾ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಜನರ ಬಗ್ಗೆ ಕಾಳಜಿ ಹಾಗೂ ಜೀವ ರಕ್ಷಣೆ ಕುರಿತು ಒಂದಿಷ್ಟು ಯೋಚನೆಯಿಲ್ಲ. ಯಾವಾಗ ಅಧಿಕಾರ ಬರುತ್ತದೆಯೋ ಯಾವಾಗ ಅದನ್ನು ಅನುಭವಿಸುತ್ತೇವೆಯೇ ಎಂಬ ಆಹಾಕಾರರದಲ್ಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತನಾರಾಯಣ ಹರಿಹಾಯ್ದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವ ವ್ಯಾಪಿ ಕೊರೋರಾ ಹೊಸ ತಳಿಗಳು ಬರುತ್ತಿವೆ. ಕಾಂಗ್ರೆಸ್ ರಾಜಕೀಯ ಬಿಟ್ಟರೆ ಏನು ಗೊತ್ತಿಲ್ಲ. ಹಿಂದೆ ಅಧಿಕಾರಿದಲ್ಲಿದ್ದಾಗ ಏನು ಮಾಡಲಿಲ್ಲ. ಈಗ ಅಧಿಕಾರದಲ್ಲಿ ಇಲ್ಲದಿರುವ ಸಂಕಷ್ಟ ಹಾಗೂ ನೋವು ಸಹಿಸಿಕೊಳ್ಳಲಾಗುತ್ತಿಲ್ಲ. ಡಿ.ಕೆ. ಶಿವಕುಮಾರ ಅವರು ತಮ್ಮ ಹಾಗೂ ಪಕ್ಷದ ಅಭಿವೃದ್ಧಿಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದರು.
ಮಹಾರಾಷ್ಟ್ರ ಗಡಿ ವಿಚಾರ: ಮಹಾರಾಷ್ಟ್ರದ ಉದ್ದವ ಠಾಕ್ರೆ ಅವರು ಇಂತಹ ಹೇಳಿಕೆ ಹಾಗೂ ಆಲೋಚನೆ ಮಾಡುವುದನ್ನು ನಿಲ್ಲಿಸಬೇಕು. ಗಡಿ ವಿಚಾರದ ಬಗ್ಗೆ ಪದೇ ಪದೇ ಉಲ್ಲೇಖ ಮಾಡುವುದರಿಂದ ಎರಡು ರಾಜ್ಯ ಜನರ ಭಾವನೆಗೆ ಧಕ್ಕೆಯಾಗುತ್ತಿದೆ. ಜನರ ಬಗ್ಗೆ ಅವರಿಗೆ ಅಲ್ಪಸ್ವಲ್ಪ ಕಾಳಜಿ ಇಲ್ಲದಾಗಿದೆ. ತಮ್ಮ ಬದುಕು ಹಾಗೂ ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ. ಇವರು ಸಮಾಜಕ್ಕೆ ಸಮಸ್ಯೆ ಹಾಗೂ ಭಾರವಾಗಿದ್ದಾರೆ ಎಂದು ಬೆಳಗಾವಿ ಹಾಗೂ ನಿಪ್ಪಾಣಿ ಕೇಂದ್ರಡಳಿತ ಪ್ರದೇಶ ಮಾಡಬೇಕು ಎಂಬ ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯಿಸಿದರು.