ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ನಾಪತ್ತೆ: ಪತ್ನಿಯಿಂದ ದೂರು ದಾಖಲು

ಹೊಸದಿಗಂತ ವರದಿ, ಕುಶಾಲನಗರ:

ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ಅವರ ಪತ್ನಿ‌ ಕುಶಾಲನಗರ ಪೊಲೀಸರ ಮೊರೆ ಹೋಗಿದ್ದಾರೆ.
ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ಎಎಸ್ಐ ಸುರೇಶ್ ಎಂಬವರೇ ನಾಪತ್ತೆಯಾಗಿರುವ ಅಧಿಕಾರಿಯಾಗಿದ್ದಾರೆ.
ಮೂಲತಃ ಹಾಸನ ಜಿಲ್ಲೆಯ ಕೊಣನೂರಿನವರಾದ ಸುರೇಶ್ ಅವರು ಕುಶಾಲನಗರದಲ್ಲಿರುವ ತಮ್ಮ ವಸತಿಗೃಹಕ್ಕೆ ಬೀಗ ಹಾಕಿ ತೆರಳಿದ್ದು, ಅವರ ಮೊಬೈಲ್ ಕೂಡಾ ಸ್ವಿಚ್‌ಆಫ್ ಆಗಿರುವುದಾಗಿ ಹೇಳಲಾಗಿದೆ.
ಮೊಬೈಲ್ ಟವರ್ ಲೊಕೇಷನ್ ಪ್ರಕಾರ ಕುಶಾಲನಗರದ ಗುಮ್ಮನಕೊಲ್ಲಿಯಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಅತ್ತ ಮನೆಗೂ ತೆರಳದ ಇತ್ತ ಕರ್ತವ್ಯಕ್ಕೂ ಹಾಜರಾಗದ ಸುರೇಶ್ ಅವರು ನಾಪತ್ತೆಯಾಗಿರುವ ಕುರಿತು ಅವರ ಪತ್ನಿ ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹುಡುಕಿಕೊಡುವಂತೆ ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!