ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ: ಇಬ್ಬರ ಬಂಧನ, ಮಹಿಳೆ ರಕ್ಷಣೆ

ಹೊಸದಿಗಂತ ವರದಿ,ಮೈಸೂರು:

ಮೈಸೂರಿನ ಭುಗತಹಳ್ಳಿ ಹೊರವಲಯದ ವೆಂಕಟಗಿರಿ ಬಡಾವಣೆಯ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ ನಡೆಸಿದ ಪೊಲೀಸರು, ವೇಶ್ಯಾವಾಟಿಕೆ ಸ್ಥಳದಲ್ಲಿದ್ದ ಇಬ್ಬರನ್ನು ಬಂಧಿಸಿ, ಮಹಿಳೆಯೊಬ್ಬರನ್ನು ರಕ್ಷಿಸಿದ್ದಾರೆ.
ಅಭಿ ಎಂಬುವವನು ಯುವತಿಯನ್ನು ಇಟ್ಟುಕೊಂಡು ವೇಶ್ಯಾವೃತಿ ನಡೆಸುತ್ತಿದ್ದನೆಂದು ಮಾಹಿತಿ ಮೇಲೆ ಮಹಾಜಾರ್ ಪಂಚಾಯ್ತುದಾರರಾಗಿ ಕರುನಾಡ ರಕ್ಷಣಾ ವೇದಿಕೆ ಸದ್ಯಸರಾದ ಬಸವರಾಜು, ಸದಸ್ಯರಾದ ಸಂಜಯ್ ಅವರ ಜೊತೆ ಗುಡಿ ಪೊಲೀಸರು ದಾಳಿಮಾಡಿ ವೇಶ್ಯಾವಾಟಿಕೆ ಸ್ಥಳದಲ್ಲಿದ್ದ ಇಬ್ಬರು ಗ್ರಾಹಕ ಶ್ರೀಧರ್ ರೆಡ್ಡಿ, ಸಂದೀಪ್ ಮತ್ತು ಒಬ್ಬ ಸಂತ್ರಸ್ಥ ಯುವತಿಯನ್ನು ರಕ್ಷಿಸಿದ್ದಾರೆ. ಆರೋಪಿ ಅಭಿ ಪರಾರಿಯಾಗಿದ್ದಾರೆ. ಈ ಬಗ್ಗೆ ಮೈಸೂರು ಮಹಿಳಾ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಈ ದಾಳಿಯಲ್ಲಿ ಮಹಿಳಾ ಠಾಣಾ ನಿರೀಕ್ಷಕರಾದ ಮಮತಾ ಮತ್ತು ಸಿಬ್ಬಂದಿಗಳಾದ ರಾಮ್ ಪ್ರಸಾದ್, ಸುನೀಲ್, ಹರೀಶ್ ಕುಮಾರ್, ದ್ರಾಕ್ಷಾಯಿಣಿ, ಚಾಲಕರಾದ ಚಿಕ್ಕಲಿಂಗಯ್ಯ ಭಾಗವಸಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!