ಹೊಸದಿಗಂತ ವರದಿ ಮಡಿಕೇರಿ:
ವಿದ್ಯುತ್ ತಂತಿ ಸ್ಪರ್ಷಿಸಿ ಆಟೋ ಚಾಲಕ ಸಾವಿಗೀಡಾಗಿರುವ ಘಟನೆ ಭಾನುವಾರ ಬೆಳಗ್ಗೆ ವೀರಾಜಪೇಟೆಯಲ್ಲಿ ನಡೆದಿದೆ.
ವೀರಾಜಪೇಟೆ ಶಿವಕೇರಿ ನಿವಾಸಿ ದಿವಾಕರ್ (58) ಮೃತ ದುರ್ದೈವಿ. ಭಾನುವಾರ ಬೆಳಗಿನ ಜಾವ 5ಗಂಟೆಗೆ ನಿಲ್ಲಿಸಿದ್ದ ಆಟೋ ತೆಗೆಯಲು ಹೋದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಷಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆ ಸಂಬಂಧ ದಿವಾಕರ್ ಪತ್ನಿ ಶೋಭಾ ವೀರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.