ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ, ಸಂಸದ ಆಯನೂರು ಮಂಜುನಾಥ್ ಬಿಜೆಪಿಗೆ ಗುಡ್ ಬೈ ಹೇಳಿ ತೆನೆ ಹೊರೋದಕ್ಕೆ ತಯಾರಾಗಿದ್ದಾರೆ.
ಹರಿಯುವ ನೀರಿಗೆ ಏನಾದರೂ ಅಡ್ಡಿ ಆದಾಗ ಅದು ಅಲ್ಲಿಯೇ ನಿಲ್ಲೋಕೆ ಸಾಧ್ಯವಾ? ರಾಜಕೀಯವೂ ಅಷ್ಟೇ ಅಡ್ಡಿ ಆದಾಗ ಬೇರೆ ದಾರಿ ಹುಡುಕಬೇಕಷ್ಟೇ ಎಂದಿದ್ದಾರೆ.
ನನಗೆ ಬೇರೆಯವರ ಬಗ್ಗೆ ಮಾತನಾಡಿ ಅಭ್ಯಾಸ ಇಲ್ಲ, ಬಿಜೆಪಿಯಿಂದ ಈಶ್ವರಪ್ಪ ಕುಟುಂಬದವರಿಗೆ ಟಿಕೆಟ್ ಗ್ಯಾರೆಂಟಿ, ನಾನು ನೆಮ್ಮದಿಯಿಂದಲೇ ರಾಜೀನಾಮೆ ನೀಡಿದ್ದೇನೆ. ನಾನು ಬಡವರ ನೈಜ ಪ್ರತಿನಿಧಿಯಾಗಲು ಇಷ್ಟಪಡುತ್ತೇನೆ. ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ, ಆದರೆ ಸ್ಪರ್ಧೆ ಮಾಡೋದು ಖಂಡಿತಾ, ನನ್ನನ್ನು ಬೆಂಬಲಿಸಿ ಎಂದಿದ್ದಾರೆ.