ಹೊಸದಿಗಂತ ವರದಿ ಬಳ್ಳಾರಿ:
75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಹೊಸ ದೆಹಲಿಯಲ್ಲಿ ನಡೆಯುವ ಪರೇಡ್ ನಲ್ಲಿ ಕಂಪ್ಲಿಯ ವಿದ್ಯಾರ್ಥಿ ಬಿ.ಸಾಯಿ ತೇಜಸ್ವಿನಿ ಅವರು ಆಯ್ಕೆಯಾಗಿದ್ದಾರೆ. ಹೊಸ ದೆಹಲಿಯಲ್ಲಿ ನಡೆಯುವ ಪರೇಡ್ ಗೆ ಕರ್ನಾಟಕ ಹಾಗೂ ಗೋವಾ ಎನ್ ಸಿಸಿ ಡೈರೆಕ್ಟರೇಟ್ ಪಡೆಯಿಂದ ವಿದ್ಯಾರ್ಥಿ ಬಿ.ಸಾಯಿ ತೇಜಸ್ವಿನಿ ಭಾಗವಹಿಸುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಂಪ್ಲಿ ಪಟ್ಟಣದ ವರ್ತಕ ಬಳ್ಳಾರಿ ಬಸಪ್ಪ, ಸುನಿತಾ ಅವರ ಪುತ್ರಿ ಜೂನಿಯರ್ ಅಂಡರ್ ಆಫೀಸರ್ ಬಿ.ಸಾಯಿ ತೇಜೆಸ್ವಿನಿ, ಇವರು ಹೊಸಪೇಟೆ ನಗರದ ವಿಜಯನಗರ ಕಾಲೇಜಿನಲ್ಲಿ ಬಿಎಸ್ಸಿ 2ನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದು, ಬಳ್ಳಾರಿ ಎನ್ ಸಿಸಿ ಬೆಟಾಲಿಯನ್ ಗೃಪ್ ನಿಂದ ವಿಜಯನಗರ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಎನ್ ಸಿಸಿ ಬೆಟಾಲಿಯನ್ ಲೆಫ್ಟಿನೆಂಟ್ ಕರ್ನಲ್ ಫಿಯೂಷ್ ಕೃಷ್ಣ, ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಸುಂಡಿ ನಾಗರಾಜ್, ಕಾಲೇಜು ಪ್ರಾಚಾರ್ಯ ಪ್ರಭಯ್ಯ, ಕ್ಯಾಪ್ಟನ್ ಪ್ರಭುಸ್ವಾಮೀ ಅವರು ವಿದ್ಯಾರ್ಥಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ