ಕಮಿಡಿಯನ್‌ ಸಪ್ತಗಿರಿ ಕಾಲು ಹಿಡಿಯಲು ಮುಂದಾದ ಬಾಲಯ್ಯ!! ಕಾರಣ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಖಂಡ ಚಿತ್ರದ ಮೂಲಕ ಅಭೂತಪೂರ್ವ ಯಶಸ್ಸನ್ನು ಪಡೆದಿರುವ ಬಾಲಯ್ಯ ಈಗ ಫುಲ್ ಸ್ವಿಂಗ್ ನಲ್ಲಿದ್ದಾರೆ.  ಸದ್ಯ NBK107 ಚಿತ್ರದ ಶೂಟಿಂಗ್ ಟರ್ಕಿಯಲ್ಲಿ ನಡೆಯುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ತಮನ್ ಸಂಗೀತ ಸಂಯೋಜನೆಯಲ್ಲಿ ಉತ್ತಮ ಹಾಡುಗಳು ಮೂಡಿಬಂದಿವೆ.

ಶೂಟಿಂಗ್ ವೇಳೆ ಬ್ರೇಕ್ ಸಿಕ್ಕಾಗ ಬಾಲಕೃಷ್ಣ, ಹಾಸ್ಯನಟ ಸಪ್ತಗಿರಿ ಅವರನ್ನು ಡೈಲಾಗ್ ವಾರ್ ಗೆ ಆಹ್ವಾನವಿತ್ತರು. ಪೌರಾಣಿಕ ಚಿತ್ರದ ಡೈಲಾಗ್ ಒಂದನ್ನು ಬಾಲಯ್ಯ ಹೇಳಿದಾಗ, ಸಪ್ತಗಿರಿ ಆ ಡೈಲಾಗ್ ಅನ್ನು ಯಾವುದೇ ಅಡೆತಡೆಯಿಲ್ಲದೆ ನಿರರ್ಗಳವಾಗಿ ಹೇಳಿದ್ದಾರೆ.  ಸಪ್ತಗಿರಿ ಪ್ರತಿಭೆಗೆ ಬಾಲಕೃಷ್ಣ ಮನಸೋತು ʼನಿನ್‌ ಕಾಲು ಕೊಡೋ ನಮಸ್ಕಾರ ಮಾಡ್ಕೊತಿನಿʼ ಎಂದು ತಮಾಷೆ ಮಾಡಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!