CINE| ಕಬಡ್ಡಿ ಜಾಹೀರಾತಿನಲ್ಲಿ ಬಾಲಯ್ಯ, ಟೈಗರ್ ಶ್ರಾಫ್, ಕಿಚ್ಚ ಸುದೀಪ್: ವಿಡಿಯೋಗೆ ಭರ್ಜರಿ ರೆಸ್ಪಾನ್ಸ್! 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅನೇಕ ಸ್ಟಾರ್ ಹೀರೋಗಳು ಜಾಹೀರಾತುಗಳ ಮೂಲಕ ಮತ್ತಷ್ಟು ಕ್ರೇಜ್‌ ಹುಟ್ಟುಹಾಕುತ್ತಿದ್ದಾರೆ. ಕ್ರಿಕೆಟ್ ಜೊತೆಗೆ ಹಲವು ರೀತಿಯ ಆಟಗಳು ಈಗ ಪ್ರೀಮಿಯರ್ ಲೀಗ್‌ಗಳನ್ನು ಆಡುತ್ತಿವೆ. ಈಗ ಮೂರು ಸಿನಿಮಾ ಇಂಡಸ್ಟ್ರಿಯಿಂದ ಮೂವರು ಹೀರೋಗಳು ಕಬಡ್ಡಿ ಲೀಗ್ ಪ್ರಚಾರ ಮಾಡುತ್ತಿದ್ದಾರೆ. ಬಾಲಕೃಷ್ಣ, ಕಿಚ್ಚ ಸುದೀಪ್ ಮತ್ತು ಟೈಗರ್ ಶ್ರಾಫ್ ಪ್ರೊ ಕಬಡ್ಡಿ ಲೀಗ್‌ಗಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಜಾಹೀರಾತು ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ಮೂವರು ವೀರರು ಕುದುರೆಗಳ ಮೇಲೆ ಬಂದು ಕಬಡ್ಡಿ ಆಡುವಂತೆ ಪ್ರೇರೇಪಿಸಿರುವ ವಿಡಿಯೋ ಎಲ್ಲರ ಮನ ಗೆದ್ದಿದೆ.

ಶೇರ್ ಮಾಡಿರುವ ವಿಡಿಯೋದಲ್ಲಿ ಕಬಡ್ಡಿ.. ನಮ್ಮ ಮಣ್ಣಿನಲ್ಲಿ ಹುಟ್ಟಿದ ಆಟ. ನಮ್ಮ ತೆಲುಗಿನ ಪುರುಷತ್ವವನ್ನು ತೋರಿಸುವ ಆಟ. ಸ್ನಾಯುಬಲವೇ ಅಸ್ತ್ರ, ಕ್ಷೇತ್ರವೇ ರಣರಂಗ, ಈ ಕಾದಾಟದವನ್ನು ಮಿಸ್ ಮಾಡಿಕೊಳ್ಳಬೇಡಿ ಎಂದು ತೆಲುಗಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಪ್ರೊ ಕಬಡ್ಡಿ ಲೀಗ್ ಸೀಸನ್ 10 ಡಿಸೆಂಬರ್ 2 ರಿಂದ ಆರಂಭವಾಗಲಿದೆ. ಇದರಲ್ಲಿ 12 ತಂಡಗಳು ಸ್ಪರ್ಧಿಸಲಿವೆ. ಈ ಬಾರಿ ಮೂರು ಇಂಡಸ್ಟ್ರಿಗಳ ಹೀರೋಗಳನ್ನು ಸೇರಿಸಿ ಭಾರತದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!