ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಂಕುತಿಟ್ಟು ಯಕ್ಷಗಾನದ ಹಿರಿಯ ಭಾಗವತ, ಪರಂಪರೆಯ ಬಹುದೊಡ್ಡ ಕೊಂಡಿ, ಅಪಾರ ಯಕ್ಷಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದ ಬಲಿಪ ನಾರಾಯಣ ಭಾಗವತರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸಂಜೆ ನಿಧನರಾದರು.
ಯಕ್ಷಗಾನ ಭಾಗವತಿಕೆಯ ಮೇರು ಶಿಖರ ಎನಿಸಿಕೊಂಡಿದ್ದ ಬಲಿಪ ಭಾಗವತರು ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿ ಮೆರೆದವರು. ತನ್ನ ಕಂಚಿನ ಕಂಠದ ಮೂಲಕ ಸಾವಿರಾರು ಕಲಾವಿದರನ್ನು ಕುಣಿಸಿ ಸಮರ್ಥ ನಿರ್ದೇಶಕ ಎಂಬ ನೆಗಳ್ತೆಗೆ ಪಾತ್ರರಾಗಿದ್ದರು. ಏರುಪದಗಳ ಮೂಲಕ ಜನಮಾನಸದಲ್ಲಿ ನೆಲೆಯಾಗಿದ್ದರು. ಇವರ ಪುತ್ರ ಬಲಿಪ ಪ್ರಸಾದ್ ಕೆಲ ತಿಂಗಳುಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು.