ದಿಗಂತ ವರದಿ ವಿಜಯಪುರ:
ಮೂರು ದಿನದ ನಂತರ ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ ನಡೆಯಲಿದೆ ಎಂದು ಜ್ಞಾನಯೋಗಾಶ್ರಮ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದರು.
ನಗರದ ಜ್ಞಾನಯೋಗಾಶ್ರದಲ್ಲಿ ಬುಧವಾರ ಮಾತನಾಡಿದ ಅವರು, ಶ್ರೀಗಳ ಮುಂದಿನ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿ ನಿರ್ಧರಿಸುತ್ತೇವೆ. ಶ್ರೀಗಳ ಚಿತೆಗೆ ಹಾಲು, ನೀರು ಹಾಕಿ ಮಂತ್ರಗಳ ಮೂಲಕ ಪೂಜೆ ಸಲ್ಲಿಸಲಾಗುತ್ತದೆ. ನಂತರ ಶ್ರೀಗಳ ಚಿತಾ ಭಸ್ಮ ಎಲ್ಲಿ ಹೇಗೆ ? ವಿಸರ್ಜಿಸುವುದು ಎಂದು ನಿರ್ಧಾರ ಮಾಡುತ್ತೇವೆ.
ಆದರೆ ಭಕ್ತರಿಗೆ ಪೂಜ್ಯರ ಚಿತಾ ಭಸ್ಮ ಕೊಡಲ್ಲ. ಭಕ್ತರು ವಿಭೂತಿ ಪಡೆದುಕೊಂಡು ಅದನ್ನು ಚಿತಾ ಭಸ್ಮದ ಹತ್ತಿರ ಇಟ್ಟು ಅದನ್ನು ಮನೆಗೆ ಕೊಂಡೊಯ್ಯಬೇಕು, ಅದನ್ನು ಪೂಜೆ ಮಾಡಬೇಕು ಎಂದರು.