ಹೊಸದಿಗಂತ ಡಿಜಿಟಲ್ ಡೆಸ್ಕ್
ಅಯೋಧ್ಯೆ: ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಮಂದಿರ ನಿರ್ಮಾಣದ ಮುಂದಿನ ಹಂತವಾಗಿ ಕೆತ್ತನೆಗೊಂಡ ಬನ್ಶಿ ಪಹಾಡ್ಪುರದ ತಿಳಿ ಗುಲಾಬಿ ಬಣ್ಣದ ಶಿಲೆಗಳನ್ನು ಕಟ್ಟೆಯ (ಪ್ಲಿಂತ್) ಮೇಲಿಡುವ ಕಾರ್ಯ ಜೂನ್ 1ರಿಂದ ಆರಂಭವಾಗಲಿದೆ.
ಅಂದು ಬೆಳಗ್ಗೆ 9.45ಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಎಲ್ಲಾ ಟ್ರಸ್ಟಿಗಳಿಂದ ಶಿಲಾನ್ಯಾಸ ನಡೆಯಲಿದೆ. ಕಾರ್ಯಕ್ರಮಕ್ಕೂ ಮುನ್ನ ಜನ್ಮಭೂಮಿ ಸಂಕೀರ್ಣದಲ್ಲಿ ಸರ್ವದೇವ್ ವಿಧಿ ವಿಧಾನಗಳು ಆರಂಭಗೊಂಡಿದ್ದು, ಮೇ 31ರ ಸಂಜೆ ಪೂರ್ಣಗೊಳ್ಳಲಿವೆ.
ಉತ್ತರ ಪ್ರದೇಶ ಸಿಎಂ ಹಾಗೂ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರ ನೇತೃತ್ವದದಲ್ಲಿ ಜೂ. 1ರಂದು ನಡೆಯುವ ಕಾರ್ಯಕ್ರಮದ ನೇರ ಪ್ರಸಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ನ ವಿಶ್ವಸ್ಥರೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪಾಲ್ಗೊಳ್ಳುತ್ತಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ