ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನೇಕ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿ ಬೇಕಾಗಿದ್ದ ಕುಖ್ಯಾತ ಖಲಿಸ್ತಾನಿ ಭಯೋತ್ಪಾದಕ ಕುಲ್ವಿಂದರ್ಜಿತ್ ಸಿಂಗ್ನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ಬಂಧಿಸಿದೆ.
ಪಂಜಾಬ್ನಲ್ಲಿ ಹಲವು ಟಾರ್ಗೆಟ್ ಹತ್ಯೆಗಳ ಹಿಂದಿನ ಸಂಚುಕೋರನಾಗಿದ್ದ ಈತನ ತಲೆಗೆ 5 ಲ.ರೂ.ಗಳ ಬಹುಮಾನ ಘೋಷಿಸಲಾಗಿತ್ತು.
ಬ್ಯಾಂಕಾಕ್ನಿಂದ ಆಗಮಿಸಿದ್ದ ಈತನನ್ನು ಶುಕ್ರವಾರ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂಧಿಸಲಾಯಿತು .ಈತ ಖಲಿಸ್ತಾನ್ ಲಿಬರೇಷನ್ ಫೋರ್ಸ್(ಕೆಎಲ್ಎಫ್), ಬಬ್ಬರ್ ಖಲ್ಸಾ ಇಂಟರ್ನ್ಯಾಷನಲ್(ಬಿಕೆಐ)ನಂತಹ ಭಯೋತ್ಪಾದಕ ಗುಂಪುಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
WANTED TERRORIST WITH REWARD OF RS 5L ARRESTED BY THE NIA FROM DELHI AIRPORT pic.twitter.com/ZOOJyelWBv
— NIA India (@NIA_India) November 21, 2022
ಈತ 2019 ರಿಂದ ಭಾರತದಿಂದ ಪರಾರಿಯಾಗಿದ್ದು, ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದನು.