ಹೊಸದಿಗಂತ ವರದಿ, ಕುಶಾಲನಗರ:
ಬೈಕ್ ಮತ್ತು ಪಿಕ್ ಅಪ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆಯೊಬ್ಬರ ಕಾಲು ಮುರಿದಿದೆ.
ಬೈಕ್ ಸವಾರ ವಿವೇಕ್ (ಕೆಎ12-8321) ಕುಶಾಲನಗರ ಕಡೆಯಿಂದ ಕೂಡಿಗೆಗೆ ಬರುವಾಗ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದ ಸರ್ಕಲ್ ನಲ್ಲಿ ಕುಶಾಲನಗರಕ್ಕೆ ಹೋಗುವ ಪಿಕ್’ಅಪ್ (ಕೆ ಎ 12- 8235) ಡಿಕ್ಕಿಯಾಗಿದೆ. ಪರಿಣಾಮವಾಗಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ವಿವೇಕ್ ಅವರ ಎಡ ಕಾಲಿಗೆ ಬಾರಿ ಪಟ್ಟು ಬಿದ್ದಿದ್ದು, ಕುಶಾಲನಗರದ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮೈಸೂರು ಅಪೋಲೋ ಆಸ್ಪತ್ರೆಗೆ ಸಾಗಿಸಲಾಗಿದೆ.
ಪಿಕ್ ಅಪ್ ಚಾಲಕ ಕುಶಾಲನಗರದ ಅಮಿತ್ ಎಂಬವರ ವಿರುದ್ಧ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.