ದಿಗಂತ ವರದಿ, ಬಳ್ಳಾರಿ:
ಗಣಿನಾಡು ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕಕ್ಕೆ ನೂತನ ಪದಾದಿಕಾರಿಗಳನ್ನು ನೂತನ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಗಾಳಿ ಶಂಕರಪ್ಪ, ಸಾಧನಾ ಹಿರೇಮಠ್, ಡಾ.ಅರುಣಾ, ವೀರಶೇಖರ್ ರೆಡ್ಡಿ, ಭಾಗ್ಯ ಲಕ್ಷ್ಮೀ ಕಮ್ಮಾರ್, ಓಬಳೇಶ್, ಶಂಕರ ರೆಡ್ಡಿ, ಪುರುಷೋತ್ತಮ ನಾಯ್ಡು (ಉಪಾಧ್ಯಕ್ಷರು), ಅನೀಲ್ಮೋಕಾ, ಅಶೋಕ್ ಕುಮಾರ್, ಶಿವಶಂಕರ್ ರೆಡ್ಡಿ (ಪ್ರಧಾನ ಕಾರ್ಯದರ್ಶಿಗಳು), ತಿಮ್ಮನಗೌಡ, ಸೌಭಾಗ್ಯ ತಿರುಮಲ, ಉಷಾ, ಅಲಿವೇಲು, ಸುರೇಶ್ ಉಡೇದ್, ಕೆ.ಎ.ವೇಮಣ್ಣ, ಮಲ್ಲನಗೌಡ ಸಿರಿಗೇರಿ, ಸುಮಾ ರೆಡ್ಡಿ( ಕಾರ್ಯದರ್ಶಿಗಳು), ಶಂಭು ಪ್ರಸಾದ್ (ಖಜಾಂಚಿ), ರಾಮಕೃಷ್ಣ (ಕಚೇರಿ ಕಾರ್ಯದರ್ಶಿ), ಡಾ.ಬಿ.ಕೆ.ಸುಂದರ್ ( ಜಿಲ್ಲಾ ವಕ್ತಾರರು)ನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.