ಗುಜರಾತ್ ಚುನಾವಣೆ ಸಮೀಕ್ಷೆಯಂತೆ ಬಿಜೆಪಿ ಬಹುಮತ ಸಾಧಿಸಲಿದೆ: ಯತ್ನಾಳ್

ಹೊಸದಿಗಂತ ವರದಿ,ವಿಜಯಪುರ:

ಸದ್ಯ ಗುಜರಾತ ಚುನಾವಣೆ ಬಗ್ಗೆ ನಡೆದಿರುವ ಸಮೀಕ್ಷೆಯಂತೆ ಬಿಜೆಪಿ ಬಹುಮತ ಸಾಧಿಸಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದೇ ರೀತಿ ಮುಂದೆ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿಯೂ ಪಿಎಂ ಮೋದಿ ನೇತ್ವತೃದಲ್ಲಿ ನಡೆಸಿ 130-40 ಸ್ಥಾನಗಳಿಸಿ ಬಹುಮತ ಸಾಧಿಸಲಿದ್ದೇವೆ. ಅಲ್ಲದೆ ಅವಧಿ ಮುನ್ನ ಕರ್ನಾಟಕದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ ಎಂದರು.

ರಾಜ್ಯದ ಪ್ರತಿ ಮತಕ್ಷೇತ್ರದ ಶಾಸಕರ ರಿಪೋರ್ಟ್ ಕಾರ್ಡ್ ಮೋದಿ ಬಳಿ ಇವೆ. ಹೈಕಮಾಂಡ್ ಸಹ ತನ್ನದೇ ಆದ ಸಮೀಕ್ಷೆ ನಡೆಸಿದೆ. ಹೊಸ ಮುಖಗಳಿಗೆ ಅವಕಾಶ ನೀಡಬಯಸಿದರೆ ಅವರ ನಿರ್ಧಾರಕ್ಕೆ ರಾಜ್ಯ ಬಿಜೆಪಿ ಶಾಸಕರು ಬದ್ಧರಾಗಿರುತ್ತೇವೆ ಎಂದರು.

2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ನಕಲಿ ಹೋರಾಟ ಎಂಬ ನಟ ಚೇತನ್ ಹೇಳಿಕೆ ವಿರುದ್ಧ ಯತ್ನಾಳ ಕಿಡಿಕಾರಿದರು. ಹಾದಿ ಬೀದಿಗಿರೋರ ಬಗ್ಗೆ ನಾನು ಮಾತನಾಡಲ್ಲ. ಇಂಥ ಸಿದ್ಧಾಂತವಿಲ್ಲದ ವ್ಯಕ್ತಿಗಳಿಗೆ ಬಹಳ ಬೆಲೆ ಕೊಡಬೇಡಿ ಎಂದರು.

ಅಂಬೇಡ್ಕರ್ ಅವರ ಜೀವನ ಮತ್ತು ಅವರ ಸಾಹಿತ್ಯವನ್ನು ಎಲ್ಲರೂ ಅಧ್ಯಯನ ಮಾಡಬೇಕು.
ಕೆಲ ಜನರು ತಮ್ಮ ಉಪಜೀವನಕ್ಕಾಗಿ ಅಂಬೇಡ್ಕರ್ ಅವರ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!