ಹೊಸದಿಗಂತ ವರದಿ ಗಂಗಾವತಿ:
ರಾಜ್ಯ ಹಾಗೂ ಅಂತಾರಾಜ್ಯದಿಂದ ಅಂಜನಾದ್ರಿಗೆ ಆಗಮಿಸಿರುವ ಹನುಮ ಮಾಲಾಧಾರಿಗಳು ಸರತಿ ಸಾಲಿನಲ್ಲಿ ನಿಂತು ರಕ್ತದಾನ ಮಾಡಿದರು.
ಅಂಜನಾದ್ರಿ ಕೆಳಭಾಗದ ಚಿಕ್ಕರಾಂಪುರದಲ್ಲಿ ಜಿಲ್ಲಾಡಳಿತ ಹಾಗೂ ರೆಡ್ಕ್ರಾಸ್ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಸೋಮವಾರ ಬೆಳಗ್ಗೆ ಆಂಜನೇಯಸ್ವಾಮಿ ದರ್ಶನ ಪಡೆದ ಭಕ್ತರು ಪ್ರಸಾದ ಸೇವಿಸಿ, ಮಾಲಾಧಾರಿಗಳು ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.