ಹೊಸದಿಗಂತ ವರದಿ, ಮಡಿಕೇರಿ:
ಹಾಡಿ ಜನರನ್ನು ಕರೆದೊಯ್ಯುತ್ತಿದ್ದ ಮೋಟಾರ್ ಬೋಟ್ ಒಂದು ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿ ಮಧ್ಯೆ ಸಿಲುಕಿಕೊಂಡ ಘಟನೆ ಕುಶಾಲನಗರ ಸಮೀಪದ ದುಬಾರೆಯಲ್ಲಿ ನಡೆದಿದೆ.
ಆದರೆ ಬೋಟ್ ಚಾಲಕನ ಸಮಯ ಪ್ರಜ್ಞೆಯಿಂದ ಅದರಲ್ಲಿದ್ದ 10 ಕ್ಕೂ ಅಧಿಕ ಮಂದಿ ಗಿರಿಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದುಬಾರೆ ಆನೆ ಶಿಬಿರದ ಗಿರಿಜನರನ್ನು ಕಾವೇರಿ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಕರೆದೊಯ್ಯತ್ತಿದ್ದ ಮೋಟಾರ್ ಬೋಟ್ ಇದ್ದಕ್ಕಿದ್ದಂತೆ ಕಾವೇರಿ ನದಿ ಮಧ್ಯೆ ಆಫ್ ಆಗಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರವಾಹದ ಮಧ್ಯೆ ಬೋಟ್ ಸಿಲುಕಿದ್ದು, ನದಿ ಮಧ್ಯೆ ಸಿಕ್ಕಿದ ಮರದ ಕೊಂಬೆಯನ್ನು ಹಿಡಿದು ಚಾಲಕ ಬೋಟ್’ನ್ನು ನಿಲ್ಲಿಸಿದ್ದಾರೆ.
ಬೋಟ್’ನಲ್ಲಿದ್ದವರು ಉಸಿರು ಬಿಗಿ ಹಿಡಿದು ನೆರವಿಗಾಗಿ ಪರದಾಡಿದ್ದು, ಬಳಿಕ ಮತ್ತೊಂದು ಬೋಟ್ ಸಹಾಯದಿಂದ ಬೋಟ್ ಹಾಗೂ ಅದರಲ್ಲಿದ್ದವರನ್ನು ಸುರಕ್ಷಿತವಾಗಿ ದಡ ಸೇರಿಸಲಾಯಿತು.