ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈನ ದೇವಾಲಯದಲ್ಲಿ ಹನ್ನೊಂದು ವರ್ಷದ ಬಾಲಕನನ್ನು ಮರಕ್ಕೆ ಕಟ್ಟಿ ಇಬ್ಬರು ವ್ಯಕ್ತಿಗಳು ಥಳಿಸಿರುವ ಅಮಾನುಷ ಘಟನೆಯೊಂದು ಮಧ್ಯಪ್ರದೇಶದ ಸಾಗರ್ ಪಟ್ಟಣದ ಬಳಿ ಇರುವ ಸಿದ್ಧಾಯತನ್ ಜೈನ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.
ಅಲ್ಲಿದ್ದವರೊಬ್ಬರು ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಜೈನ ದೇವಸ್ಥಾನದ ಅರ್ಚಕ ಹಾಗೂ ಮತ್ತೊಬ್ಬ ಯುವಕ ಸೇರಿ ಬಾಲಕನನ್ನು ಹಿಡಿದು ಮರಕ್ಕೆ ಕಟ್ಟಿದ್ದಾರೆ. ಬಾಲಕ ಚೀರಾಡುತ್ತಿರುವ ಶಬ್ದ ಕೇಳಿ ಬಂದ ಇಬ್ಬರು ವ್ಯಕ್ತಿಗಳನ್ನು ಸಹ ಪೂಜಾರಿ ಬೈದು ಕಳುಹಿಸಿದರು.
ಬಾಲಕನ ಪೋಷಕರು ಮೋತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಎಸ್ಸಿ ಮತ್ತು ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಮುಖ ಆರೋಪಿಯನ್ನು ರಾಕೇಶ್ ಜೈನ್ ಎಂದು ಗುರುತಿಸಲಾಗಿದೆ. ಘಟನೆ ಕುರಿತು ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
कहते हैं बच्चे भगवान का रूप होते हैं लेकिन मध्य प्रदेश के सागर में बच्चों के साथ किए जा रहे व्यवहार का एक अलग ही रूप देखने को मिल रहा है.. यहां एक बच्चे को रस्सी से बांधकर पीटा गया.@MPDial100@DGP_MP#MadhyaPradesh #sagar #SocialJustice pic.twitter.com/xdFxnr9lyH
— Shalini Singh (@shalinisengar23) September 10, 2022