ಹೊಸದಿಗಂತ ವರದಿ, ಚಿಕ್ಜೋಡಿ:
ನಭಕ್ಕೆ ಚಿಮ್ಮತ್ತಿರುವ ಭಾರಿ ಹೋಗೆ, ಕಾರ್ಖಾನೆ ಸುತ್ತಲು ಆವರಿಸಿದ ಕಪ್ಪು ಮೋಡದಂತ ಛಾಯೆ, ಆಕಸ್ಮಿಕ ಬೆಂಕಿ ಹತ್ತಿ ಭಯಂಕರ ಹೊತ್ತಿ ಉರಿದ ಸಕ್ಕರೆ ಕಾರ್ಖಾನೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಅವಘಡ ಸಂಭವಿಸಿದೆ.ದಿ ಉಗಾರ ಶುಗರ್ಸ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಕಳೆದ ಹಲವು ಬಾರಿ ಕಾರ್ಖಾನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದರೂ ಎಚ್ಚೆತ್ತುಕೊಳ್ಳದ ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ ಎನ್ನಲಾಗುತ್ತಿದೆ.ಬೆಂಕಿ ನಂದಿಸಲು ಅಥಣಿ ಕಾಗವಾಡ,ಅಗ್ನಿಶಾಮಕ ಸಿಬ್ಬಂದಿಳಿಂದ ಭಾರಿ ಹರಸಾಹಸ ನಡೆಯುತ್ತಿದ್ದು, ತೀವ್ರಗೊಳ್ಳುತ್ತಿರುವ ಬೆಂಕಿಯ ಕೆನ್ನಾಲಗೆಯಿಂದಾಗಿ ಹೊರಹೊಮ್ಮಿದ ವಿಪರೀತ ಹೊಗೆಯ ನಡುವೆ ಭಯದ ವಾತಾವರಣ ಸ್ಥಳದಲ್ಲಿ ನಿರ್ಮಾಣ ವಾಗಿದೆ.