ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂಟೈನರ್ ಟ್ರಕ್ಗೆ ರಾಜ್ಯ ಸಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟಿದ್ದು, 28 ಮಂದಿ ಗಾಯಗೊಂಡಿರುವ ಘಟನೆ ಮುಂಬೈ-ಗೋವಾ ಹೆದ್ದಾರಿಯಲ್ಲಿ ನಡೆದಿದೆ.
ಬಸ್ ಮತ್ತು ಕಂಟೈನರ್ ಟ್ರಕ್ ಅಕ್ಕಪಕ್ಕದಲ್ಲಿ ಚಲಿಸುತ್ತಿರುವ ವೇಳೆ ತಾಲೇಗಾಂವ್ ಗ್ರಾಮದ ಮಂಗಾವ್ ಬಳಿ ಈ ದುರಂತ ಸಂಭವಿಸಿದೆ ಎಂದು ರಾಯಗಢ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಪ್ರಯಾಣಿಕ ಡೊಂಬಿವಲಿ ನಿವಾಸಿ ವಿನೋದ್ ತರಳೆ (38) ಮೃತಪಟ್ಟಿದ್ದು, ಅವರ ಪತ್ನಿ ವೈಷ್ಣವಿ ಮತ್ತು 15 ವರ್ಷದ ಮಗ ಅಥರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂಬತ್ತು ಮಹಿಳೆಯರು, ಮೂವರು ಹುಡುಗಿಯರು ಸೇರಿದಂತೆ ಒಟ್ಟು 28 ಪ್ರಯಾಣಿಕರು ಮತ್ತು ಐದು ಮಕ್ಕಳು ಗಾಯಗೊಂಡಿದ್ದಾರೆ.
ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಾಗಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.