ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ವಿಮಾನ ನಿಲ್ದಾಣದ ಮೂಲಸೌಕರ್ಯವನ್ನು ನಟ ಮಾಧವನ್ ಶ್ಲಾಘಿಸಿದ್ದಾರೆ. ಮಾಧವನ್ ಮೆಚ್ಚುಗೆಯ ಮಾತುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ನಟ, ಬರಹಗಾರ ಮತ್ತು ನಿರ್ದೇಶಕ ಆರ್. ಮಾಧವನ್ ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್)ನ ಹೊಸದಾಗಿ ತೆರೆಯಲಾದ ಟರ್ಮಿನಲ್ನ ಮೂಲಸೌಕರ್ಯವನ್ನು ಮೆಚ್ಚಿಕೊಂಡಿದ್ದಾರೆ. ವಿದೇಶದಲ್ಲಿರುವ ಅನುಭವ ಆಯಿತೆಂದು ತಮ್ಮ Instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ”ನಾನು ಈಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ನಲ್ಲಿದ್ದೇನೆ ಅದರೆ ಈ ಜಾಗ ನನಗೆ ವಿದೇಶದಲ್ಲಿರುವ ಭಾವನೆ ಕೊಡುತ್ತಿದೆ. ಅಷ್ಟರ ಮಟ್ಟಿಗೆ ಈ ನಿಲ್ದಾಣ ಅಭಿವೃದ್ದಯಾಗಿದೆ ಎಂದರು. ಇದು ವಿಮಾನ ನಿಲ್ದಾಣ ಎಂದರೆ ಯಾರು ನಂಬುವುದಿಲ್ಲ. ಭಾರತದಲ್ಲಿ ಮೂಲಭೂತ ಸೌಲಭ್ಯಗಳು ನಂಬಲಸಾಧ್ಯವಾಗಿವೆ. ಇಲ್ಲಿನ ಎಲ್ಲಾ ಸೌಕರ್ಯಗಳೂ ಅದ್ಭುತವಾಗಿದೆ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಮಾಧವನ್ ಪೋಸ್ಟ್ ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ‘ಭಾರತದ ಬೆಳವಣಿಗೆಗೆ ಮುಂದಿನ ತಲೆಮಾರಿನ ಮೂಲಭೂತ ಸೌಕರ್ಯ’ ಎಂದು ಪ್ರಧಾನಿ ಮೋದಿ ರಿಪ್ಲೈ ಕೊಟ್ಟಿದ್ದಾರೆ. ವಿದೇಶಿ ವಿಮಾನ ನಿಲ್ದಾಣಗಳಿಗಿಂತ ಭಾರತದ ವಿಮಾನ ನಿಲ್ದಾಣಗಳು ಉತ್ತಮವಾಗಿವೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.