ಹೊಸ ದಿಗಂತ ವರದಿ, ಹಾವೇರಿ:
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಹಿಂದೂ ಕಾರ್ಯಕ್ರಮದಲ್ಲಿ ನಗರದ ಹೀರೋ ಬೈಕ್ ಶೋ ರೂಂನ ಮಾಲಿಕ ಪವನ ಕೆ.ಬಿ ದೇಸಾಯಿ ಅವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಕಸಾಪ ಅಧ್ಯಕ್ಷ ಮಹೇಶ್ ಜೋಷಿ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಈ ಸಮಯದಲ್ಲಿ ಹಾಜರಿದ್ದರು.
ಹೀರೋ ಬೈಕ್ ಶೋ ರೂಂನ ಮಾಲಿಕರಾದ ಪವನ ಕೆ ಬಿ ದೇಸಾಯಿ ಅವರು ಉದ್ಯಮಿ ಆಗಿದ್ದುಕೊಂಡು ವಿವಿಧ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ಸುದೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ 2020-22ನೇ ಸಾಲಿನಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಅರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗಿದೆ.
ಉದ್ಯಮಿಯಾಗಿದ್ದುಕೊಂಡು ಕೋವಿಡ್ ಸಮಯದಲ್ಲಿ ನಿರಂತರವಾಗಿ ದಿನದ 24 ಗಂಟೆ ಸೋಂಕಿತರ ನೇರವಿಗೆ ನಿಂತಿದ್ದರು. ಹೀರೋ ಶೋ ರೂಂ ಮೂಲಕ ನೂರಾರು ಜನರಿಗೆ ಉದ್ಯೋಗ ನೀಡಿ, ಹಲವರ ಬಾಳಿಗೆ ಬೆಳಕಾಗಿದ್ದಾರೆ. ಶೋ ರೂಂಗೆ ಸೌರಶಕ್ತಿಯನ್ನು ವಿದ್ಯುತ್ನ್ನು ಬಳಸಿಕೊಂಡು ಪರಿಸರ ಮಾಲಿನ್ಯ ನಿವಾರಣೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಈ ಎಲ್ಲ ಸೇವೆಗಳನ್ನು ಪರಿಗಣಿಸಿ ಆರ್ಯಭಟ ಪ್ರಶಸ್ತಿಯನ್ನು ನೀಡಲಾಗಿದೆ.