ಸದನದಲ್ಲಿ ಹೊಸ ದಿಗಂತ ವರದಿ ಪ್ರದರ್ಶಿಸಿದ ಬಿವೈವಿ

 

ಹೊಸ ದಿಗಂತ ವರದಿ, ವಿಧಾನಸಭೆ: ರಾಜ್ಯದಲ್ಲಿ ಬರದಿಂದ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಕಣ್ಣಿದ್ದರೂ ಕುರುಡನಂತೆ, ಕಿವಿಯಿದ್ದೂ ಕಿವುಡನಂತೆ ವರ್ತಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಉತ್ತರ ಕರ್ನಾಟಕ ಅಭಿವೃದ್ಧಿಯ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಈ ಬಾರಿ ಬರದಿಂದ ಲಕ್ಷಾಂತರ ಟನ್ ಉತ್ಪಾದನೆ ಆಗುತ್ತಿದ್ದ ಬೆಳೆಗಳು ನಷ್ಟವಾಗಿವೆ. ಸಾಲ ತೀರಿಸಲಾರದೆ 456 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿ ಪ್ರಕಟವಾಗಿದೆ ಎಂದು ಹೊಸದಿಗಂತ ಪತ್ರಿಕೆಯಲ್ಲಿ ಬುಧವಾರ (13/12/23) ಪ್ರಕಟವಾದ “ರಾಜ್ಯದಲ್ಲಿ ಭೀಕರ ಬರ; 456 ರೈತರು ಆತ್ಮಹತ್ಯೆ” ಎಂಬ ಶೀರ್ಷಿಕೆಯ ವಿಶೇಷ ವರದಿ ಪ್ರದರ್ಶಿಸಿದರು.

ಪ್ರಸ್ತುತ ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಎದುರಿಸುತ್ತಿರುವ ಸಂಕಷ್ಟ, ಗುಳೆ ಹೋಗುವುದರ ಬಗ್ಗೆ ಸರ್ಕಾರದ ಗಮನ ಸೆಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!