ಚೆನ್ನೈ ಬ್ಯಾಟಿಂಗ್ ಅಬ್ಬರ: ಗುಜರಾತ್ ಗೆಲುವಿಗೆ 207 ರನ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಾಯಕ ರುತುರಾಜ್ ಗಾಯಕ್ವಾಡ್, ರಾಚಿನ್ ರವೀಂದ್ರ, ಶಿವಂ ದುಬೆಯ ಸ್ಫೋಟಕ ಬ್ಯಾಟಿಂಗ್ ಗೆ ಸಿಎಸ್‌ಕೆ 7 ವಿಕೆಟ್ ನಷ್ಟಕ್ಕೆ 206 ರನ್ ಸಿಡಿಸಿದೆ. ಗುಜರಾತ್ ಗೆ ಬೃಹತ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ತಂಡಕ್ಕೆ ರುತುರಾಜ್ ಗಾಯಕ್ವಾಡ್ ಹಾಗೂ ರಾಚಿನ್ ರವೀಂದ್ರ ಉತ್ತಮ ಆರಂಭ ನೀಡಿದರು. ಆರಂಭದಿಂದಲೇ ಗುಜರಾತ್ ಬೌಲರ್ಸ್ ದುಬಾರಿಯಾದರು. ರಾಚಿನ್ ರವೀಂದ್ರ ಕೇವಲ 20 ಎಸೆತದಲ್ಲಿ 46 ರನ್ ಸಿಡಿಸಿ ಔಟಾದರು. ಇತ್ತ ರುತುರಾಜ್ ಗಾಯಕ್ವಾಡ್ 46 ರನ್ ಸಿಡಿಸಿದರು.

ಸಿಎಸ್‌ಕೆ ಬ್ಯಾಟ್ಸ್‌ಮನ್ ಪೈಕಿ ಅಜಿಂಕ್ಯ ರಹಾನೆ ನಿರೀಕ್ಷಿತ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ರಹಾನೆ 12 ರನ್ ಸಿಡಿಸಿ ಔಟಾದರು. ರಹಾನೆ ಬಳಿಕ ಶಿವಂ ದುಬೆ ಅಬ್ಬರ ಆರಂಭಗೊಂಡಿತು. ಕೇವಲ 23 ಎಸೆದಲ್ಲಿ 51 ರನ್ ಸಿಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!