ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷ ಅಕ್ಟೋಬರ್ 28 ರಿಂದ ಪ್ರಾರಂಭವಾದ ಛತ್ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಛತ್ ಪೂಜೆಯ ಕೊನೆಯ ದಿನವನ್ನು ‘ಭೋರ್ಕಾ ಆರಾಘ್’ ಎಂದು ಕರೆಯಲಾಗುತ್ತದೆ. ಅಂದರೆ, ಭಕ್ತರು ಸೂರ್ಯೋದಯಕ್ಕೆ ಮುಂಚಿತವಾಗಿ ನದಿಯ ದಡಕ್ಕೆ ಹೋಗಿ ಉದಯಿಸುವ ಸೂರ್ಯನಿಗೆ ‘ಅರ್ಘ್ಯ’ ಅರ್ಪಿಸುತ್ತಾರೆ. ಮಂಗಳಕರ ಸಂದರ್ಭವನ್ನು ಆಚರಿಸಲು, ದೇಶದ ವಿವಿಧ ನಗರಗಳಲ್ಲಿ ಜನರು ನದಿ ದಂಡೆಗಳಲ್ಲಿ ನೆರೆದಿದ್ದರು.
ಲಕ್ನೋದ ಗೋಮತಿ ನದಿ ಘಾಟ್ನಲ್ಲಿ ಭಕ್ತರಿಂದ ಛತ್ ಪೂಜೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸೂರ್ಯ ದೇವರಿಗೆ ಅರ್ಘ್ಯ ಸಲ್ಲಿಸಿದ ನಂತರ ಪೂಜೆ ಪೂರ್ಣಗೊಂಡಿತು.
ಛತ್ ಪೂಜೆಯ ಸಂದರ್ಭದಲ್ಲಿ, ವಾರಣಾಸಿಯ ಅಸ್ಸಿ ಘಾಟ್ನಲ್ಲಿ ಸೂರ್ಯ ದೇವರಿಗೆ ‘ಸೂರ್ಯೋದಯ ಅರ್ಘ್ಯ’ ಅರ್ಪಿಸಲು ಭಕ್ತರು ಜಮಾಯಿಸಿದರು.
ಪಾಟ್ನಾದ ನಾಲ್ಕು ದಿನಗಳ ಛತ್ ಪೂಜೆ ಆಚರಣೆಯ ಅಂತಿಮ ದಿನದಂದು ಭಕ್ತರು ದಿಘಾ ಘಾಟ್ನಲ್ಲಿ ಜಮಾಯಿಸಿದರು. ಹಬ್ಬದ ಸಮಯದಲ್ಲಿ ಸೂರ್ಯ ದೇವರ ಜೊತೆಗೆ ಛಾತಿ ಮಾತೆಯನ್ನು ಪೂಜಿಸಲಾಗುತ್ತದೆ.
ಕೋಲ್ಕತ್ತಾದ ದಹಿ ಘಾಟ್ನಲ್ಲಿ ಭಕ್ತರು ಛತ್ ಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸಿ ಪೂಜೆ ಸಲ್ಲಿಸಲಾಯಿತು.
ರಾಂಚಿಯ ಹತಾನಿಯಾ ಘಾಟ್ನಲ್ಲಿ ಭಕ್ತರು ಒಗ್ಗೂಡಿ 4 ದಿನಗಳ ಛತ್ ಪೂಜೆ ಉತ್ಸವದ ಕೊನೆಯ ದಿನವನ್ನು ಆಚರಿಸಿದರು.
ಭುವನೇಶ್ವರದ ಕುವಾಖೈ ನದಿ ಘಾಟ್ನಲ್ಲಿ 4 ದಿನಗಳ ಛತ್ ಪೂಜೆ ಉತ್ಸವದ ಕೊನೆಯ ದಿನದಂದು ಹೆಚ್ಚಿನ ಸಂಖ್ಯೆಯ ಭಕ್ತರು ಸೂರ್ಯ ದೇವನಿಗೆ ‘ಸೂರ್ಯೋದಯ ಅರ್ಘ್ಯ’ ಅರ್ಪಿಸಿದರು.
ಬೆಂಗಳೂರಿನ ಹಲಸೂರ್ ಲೇಕ್ನಲ್ಲೂ ಸಹ ಛತ್ ಪೂಜೆ ಉತ್ಸವ ಜರುಗಿದ್ದು, ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಸೂರ್ಯನಿಗೆ ಅರ್ಘ್ಯ ಅರ್ಪಿಸಿದರು.