ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮೈಸೂರಿನಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.
ಬೆಳಗ್ಗಿನಿಂದ ಸಂಜೆಯವರೆಗೂ ಕಾರ್ಯಕ್ರಮಗಳಲ್ಲಿ ಸಿಎಂ ಬ್ಯುಸಿಯಾಗಿದ್ದು, ಮಧ್ಯಾಹ್ನ ೧೨:೩೦ಕ್ಕೆ ರಾಮಕೃಷ್ಣ ನಗರದ ಲಿಂಗಾಬುದಿ ಕೆರೆಯ ಸಸ್ಯಶಾಸ್ತ್ರೀಯ ತೋಟವನ್ನು ಉದ್ಘಾಟನೆ ಮಾಡಲಿದ್ದಾರೆ.
ನಂತರ ತೋಟಗಾರಿಕೆ ಪಿತಾಮಹ ಡಾ. ಎಮ್ ಎಚ್ ಮರೀಗೌಡ ಪ್ರತಿಮೆ ಅನಾವರಣ ಮಾಡಲಿದ್ದಾರೆ. ನಂತರ ವರಸಿದ್ಧಿ ವಿನಾಯಕ ಹೆಲ್ತ್ಕೇರ್ನ ಆರ್ಯ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ. ನಂತರ ಚಾಮರಾಜಪುರಂದಲ್ಲಿರುವ ಆರ್ಯ ಆಸ್ಪತ್ರೆ ಉದ್ಘಟಿಸಲಿದ್ದಾರೆ.