ಎರಡು ಬೈಕ್‌ಗಳ ನಡುವೆ ಡಿಕ್ಕಿ: ಸವಾರ ಸಾವು, ಮತ್ತೊಬ್ಬನಿಗೆ ತೀವ್ರ ಗಾಯ

ಹೊಸದಿಗಂತ ವರದಿ,ಮೈಸೂರು:

ಎರಡೂ ಪಲ್ಸರ್ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರನೊಬ್ಬ ಸಾವನ್ನಪ್ಪಿ ಮತ್ತೊಬ್ಬ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಬಲ್ಲಾಳ್ ವೃತ್ತದ ಶ್ರೀರಾಮಂಮದಿರ ಬಳಿ ನಡೆದಿದೆ. ದರ್ಶನ್ ಕುಮಾರ್ (27) ಮೃತಪಟ್ಟ ಬೈಕ್ ಸವಾರ. ಮತ್ತೊಬ್ಬ ಬೈಕ್ ಸವಾರ ಶಿವಕುಮಾರ್‌ಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಂಗೋತ್ರಿ ಲೇಔಟ್ ನಿವಾಸಿಯಾಗಿರುವ ದರ್ಶನ್ ಕುಮಾರ್, ಮೈಸೂರು ನಗರಪಾಲಿಕೆಯಲ್ಲಿ ವಾಟರ್‌ಮ್ಯಾನ್ ಆಗಿದ್ದ ಕೆಲಸ ನಿರ್ವಹಿಸುತ್ತಿದ್ದ. ಬೈಕ್ ಅಪಘಾತಕ್ಕೆ ನ್ಯೂ ಕಾಂತರಾಜ ಅರಸು ರಸ್ತೆ ಗುಂಡಿಬಿದ್ದಿರುವುದೇ ಕಾರಣ. ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳಿಂದ ಹೆಚ್ಚಿದ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಘಟನೆ ಸಂಬAಧ ಕೆ.ಆರ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!