ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಿಗ್ ಬಾಸ್ ಮನೆಯಲ್ಲಿ ಸದಾ ಕಿತ್ತಾಟ ಆಗುತ್ತಲೇ ಇದ್ದು, ಈ ವಾರ ನಡೆದ ಗೊಂಬೆ ತಯಾರಿಸುವ ಟಾಸ್ಕ್ನಲ್ಲಿ ಕಿತ್ತಾಟದ ನಡುವೆ ನಟ ಅರುಣ್ ಸಾಗರ್ ಕೈ ಬೆರಳಿಗೆ ಪೆಟ್ಟಾಗಿದೆ. ಇದರ ಪರಿಣಾಮ, ಆಪರೇಷನ್ ಕೂಡ ಮಾಡಲಾಗಿದೆ.
ದೊಡ್ಮನೆ ಎಂಟನೇ ವಾರಕ್ಕೆ ಕಾಲಿಟ್ಟಿದ್ದು, ಸ್ಪರ್ದಿಗಳ ನಡುವೆ ಪೈಪೋಟಿ ಹೆಚ್ಚುತ್ತಿದೆ. ಈ ವಾರ ನೀಡಿದ ಟಾಯ್ ಫ್ಯಾಕ್ಟರಿ ಎಂಬ ಟಾಸ್ಕ್ ವೇಳೆ ಗೊಂಬೆಗಳನ್ನ ತಯಾರಿಸಲು ಕನ್ವೇಯರ್ ಬೆಲ್ಟ್ನಿಂದ ಸಾಮಾಗ್ರಿಗಳನ್ನ ಪಡೆಯಬೇಕಿತ್ತು. ಆ ಕ್ಷಣ ಅರುಣ್ ಸಾಗರ್ಗೆ ಪೆಟ್ಟಾಗಿದೆ.
ಬಲಗೈ ಕಿರುಬೆರಳಿಗೆ ಪೆಟ್ಟು ಬಿದ್ದಿದ್ದ ಕಾರಣ ಅರುಣ್ ಸಾಗರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಅವಶ್ಯವಿದ್ದ ಕಾರಣ ಒಂದು ದಿನ ಆಸ್ಪತ್ರೆಯಲ್ಲೇ ಅರುಣ್ ಸಾಗರ್ ಇದ್ದರು. ಪರಿಣಾಮ, ಕೊನೆಯ ದಿನದ ಟಾಸ್ಕ್ನಲ್ಲಿ ಅವರು ಭಾಗವಹಿಸಲಿಲ್ಲ.
ದ್ಯ ಬಿಗ್ ಬಾಸ್ ಮನೆಗೆ ಅರುಣ್ ಸಾಗರ್ ವಾಪಸ್ ಆಗಿದ್ದಾರೆ. ತಮ್ಮ ಕೈಗೆ ಆಪರೇಷನ್ ಮಾಡಲಾಗಿದೆ ಎಂದು ಅರುಣ್ ಸಾಗರ್ ಮನೆಮಂದಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಟಾಸ್ಕ್ನಿಂದ ದೂರವಿದ್ದು, ದೊಡ್ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.