ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಜಾಬ್ ವಿವಾದದಲ್ಲಿ ಕಾಂಗ್ರೆಸ್ ಕೈವಾಡವಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಂದಾಯ ಸಚಿವ ಆರ್.ಆಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಎಲ್ಲ ಕಾಂಗ್ರೆಸ್ನವರೂ ಅವರ ಪರವಾಗಿಯೇ ಮಾತಾಡುತ್ತಿದ್ದಾರೆ. ಆದರೆ ಕೇಸರಿ ಹಿಂದೆ ಸಂಘ ಪರಿವಾರದ ಕೈವಾಡ ಇಲ್ಲ ಎಂದರು.
ಅವರು ಹಿಜಾಬ್ ಧರಿಸಿ ಬಂದಿದ್ದಕ್ಕೆ ಇವರು ಶಾಲು ಧರಿಸಿದ್ದಾರೆ.ಅವರು ಹಿಜಾಬ್ ಬಿಟ್ಟು ಬಂದರೆ ಇವರೂ ಶಾಲು ಬಿಟ್ಟು ಬಿಡುತ್ತಾರೆ. ಆದರೆ ಇಲ್ಲಿ ಹಿಜಾಬ್ ಧರಿಸಿ ಬಂದ್ರೂ ತಪ್ಪೇ, ಶಾಲು ಧರಿಸಿ ಬಂದರೂ ತಪ್ಪೇ. ಎರಡಕ್ಕೂ ನಮ್ಮ ವಿರೋಧವಿದೆ ಎಂದರು.