ಗೆಲ್ಲೋಕಾಗಿ ರಾಷ್ಟ್ರದ್ರೋಹಿ ಸಂಘಟನೆ ಜತೆ ಕೈ ಜೋಡಿಸಿದ ಕಾಂಗ್ರೆಸ್ : ಕೆ.ಎಸ್. ಈಶ್ವರಪ್ಪ

ಹೊಸದಿಗಂತ ವರದಿ ಶಿವಮೊಗ್ಗ :

ಕಾಂಗ್ರೆಸ್ ರಾಷ್ಟ್ರ ದ್ರೋಹಿ ಸಂಘಟನೆಯಾದ ಎಸ್ ಡಿಪಿಐ ನೊಂದಿಗೆ ನೇರವಾಗಿ‌ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವ ನೀಚತನಕ್ಕೆ ಮುಂದಾಗಿದೆ ಎಂದು ಶಾಸಕ‌ ಕೆ.ಎಸ್. ಈಶ್ವರಪ್ಪ ‌ಹೇಳಿದರು.

ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನ ಈ ನೀಚತನ ಎದುರಿಸಲು ಬಿಜೆಪಿ ಸಿದ್ಧವಿದೆ. ರಾಷ್ಟ್ರ ದ್ರೋಹಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡ ಕಾಂಗ್ರೆಸ್ ಗೆ ಜನರು ಕೂಡ ಬೆಂಬಲ ನೀಡಬಾರದು ಎಂದರು.
ಪಿಎಫ್ ಐ ಬ್ಯಾನ್ ಆಗಿದ್ದರೂ ಅದರಲ್ಲಿದ್ದವರು ಬೇರೆ ರೂಪದಲ್ಲಿ ಬರಲು ಯತ್ನಿಸುತ್ತಿದ್ದಾರೆ.ಎಸ್ ಡಿಪಿ ಐ ರಾಜಕೀಯ ಪಕ್ಷವಾಗಿದ್ದರಿಂದ ಅದನ್ನು‌ ಬ್ಯಾನ್ ಮಾಡಲು ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಬೇಕಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!