ಹೊಸದಿಗಂತ ವರದಿ, ಧಾರವಾಡ:
ಅಗ್ನಿಪಥ ಕೇಂದ್ರ ಸರಕಾರದ ಮಹತ್ತರ ಯೋಜನೆ. ನಾಲ್ಕು ವರ್ಷದ ಬಳಿಕ ಬೇಕಾದ ಉದ್ಯೋಗ ಸೇರಬಹುದು. ಇದನ್ನು ವಿರೋಧಿಸಿ ಕಾಂಗ್ರೆಸ್ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಲು ಯುವಕರಿಗೆ ಪ್ರೇರೇಪಿಸುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಆರೋಪಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಗ್ನಿಪಥ ವಿರೋಧಿಗಳೆಲ್ಲರೂ ಸೇನೆ ಸೇರಬಸುವವರೇ. ದೇಶ ರಕ್ಷಣೆಯೇ
ಸೇನೆ ಸೇರುವ ಉದ್ದೇಶ. ಆದರೆ, ಪ್ರತಿಭಟನೆಯ ನೆಪದಲ್ಲಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಇದರಲ್ಲಿ ಕಿಡಗೇಡಿಗಳ ಕುತಂತ್ರವಿದೆ ಎಂದು ದೂರಿದರು.
ದೇಶ ಪ್ರೇಮ ತೋರಿಸುವವರು ರೈಲ್ವೆಗೆ ಬೆಂಕಿ ಹಚ್ಚುತ್ತಾರೆಯೇ? ಕೆಲವರು ದುರುದ್ದೇಶ ಪೂರಕವಾಗಿ ಯುವಕರಿಗೆ
ಪ್ರಚೋದನೆ ನೀಡುತ್ತಿದ್ದಾರೆ. ಇದರಲ್ಲಿ ಅಮಾಯಕ ಯುವಕರು ಬಲಿಯಾಗುತ್ತಿದ್ದಾರೆ. ದೇಶಾದ್ಯಂತ ಕಾಂಗ್ರೆಸ್ ಇದೇ ಕೆಲಸ
ಮಾಡುತ್ತಿದೆ ಎಂದು ಆಪಾದಿಸಿದರು.