ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಸರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಯಿಯನ್ನು ಕಾರ್ಮಿಕರೊಬ್ಬರು ರಕ್ಷಣೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವ್ಯಕ್ತಿಯ ಸಮಾಜಮುಖಿ ಕಾರ್ಯವನ್ನು ಜನರು ಶಾಘಿಸಿದ್ದಾರೆ.
ಸುಶಾಂತ್ ನಂದಾ ಎಂಬ ಅರಣ್ಯಾಧಿಕಾರಿ ರಕ್ಷಣಾ ವಿಡಿಯೋವನ್ನು ತಮ್ಮ ಟಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಮಾನವೀಯತೆ ನಮ್ಮ ಜಾತಿಯಾಗಬೇಕು, ಪ್ರೀತಿ ನಮ್ಮ ಧರ್ಮವಾಗಬೇಕು ಎಂದು ಕ್ಯಾಪ್ಷನ್ ನೀಡಿದ್ದಾರೆ.
ಇದುವರೆಗೂ ಈ ವಿಡಿಯೋ 129.5ಸಾವಿರ ಮಂದಿ ವೀಕ್ಷಿಸಿದ್ದು, 1, 205 ರಿಟ್ವೀಟ್ ಆಗಿದೆ.
Humanity should be our race. Love should be our religion.
A construction worker pulls a dog being swept away by swirling water.
🎥GoodNews Correspondent pic.twitter.com/4wSuYlLowN— Susanta Nanda IFS (@susantananda3) April 14, 2022