ಹೊಸದಿಗಂತ ವರದಿ, ಅಂಕೋಲಾ:
ಅಪರಿಚಿತ ವಾಹನ ಬಡಿದು ಕರು ಸೇರಿದಂತೆ ಮೂರು ಹಸುಗಳು ಸಾವಿಗೀಡಾದ ಘಟನೆ ತಾಲೂಕಿನ ವಂದಿಗೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದು ಹೆದ್ದಾರಿ ಮಧ್ಯದಲ್ಲಿ ಬಿದ್ದುಕೊಂಡಿದ್ದ ದನಕರುಗಳ ಕಳೆಬರ ಮನ ಕರಗುವಂತಿತ್ತು.
ನಸುಗತ್ತಲಿನಲ್ಲಿ ಯಾವುದೋ ವಾಹನ ಹಸುಗಳಿಗೆ ಬಡಿದ ಪರಿಣಾಮ ಅವುಗಳು ಮೃತ ಪಟ್ಟಿದ್ದು ಯಾರೂ ವಾರಸುದಾರರು ಈ ಕುರಿತು ವಿಚಾರಿಸಲು ಆಗಮಿಸಿಲ್ಲ ಸುಮಾರು 3 ಘಂಟೆಗಳಿಗೂ ಅಧಿಕ ಕಾಲ ಹಸುಗಳ ಕಳೆಬರ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ಬಿದುಕೊಂಡ ಕಾರಣ ಸಂಚಾರಕ್ಕೆ ತೊಂದರೆ ಆಗುತ್ತಿರುವುದನ್ನು ಗಮನಿಸಿದ ಲಕ್ಷ್ಮೇಶ್ವರದ ಚಿನ್ನದಗರಿ ಗರಿ ಯುವಕ ಸಂಘದವರು 1033 ಹೈವೆ ಪಟ್ರೋಲಿಂಗ್ ಗೆ ಕರೆ ಮಾಡಿ ವಿಷಯವನ್ನು ಗಮನಕ್ಕೆ ತಂದರು.
ತಕ್ಷಣ ಸ್ಥಳಕ್ಕೆ ಆಗಮಿಸಿದ ಹೈವೆ ಪಟ್ರೊಲಿಂಗ್ ಸಿಬ್ಬಂದಿ ನವೀನ ಪಡ್ತಿ, ವಾಘೇಶ ನಾಯ್ಕ, ಬಂಟಾ ನಾಯ್ಕ ಪುರಸಭೆಗೆ ಮಾಹಿತಿ ನೀಡಿ
ಪೌರ ಕಾರ್ಮಿಕರ ಸಹಾಯದಿಂದ ಮೃತ ದನಕರುಗಳ ಕಳೆಬರಗಳನ್ನು
ಪುರಸಭೆ ವಾಹನದಲ್ಲಿ ಸಾಗಿಸುವ ಮೂಲಕ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು.
ಸತೀಶ ನಾಯ್ಕ ಹನುಮಟ್ಟ ಮೊದಲಾದವರು ಸಹಕರಿಸಿದರು.