ಸಿನಿಮಾ ಶೂಟಿಂಗ್ ವೇಳೆ ಕ್ರೇನ್ ಅವಘಡ: ಸಾಹಸ ನಿರ್ದೇಶಕ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಸಿನಿಮಾ ಶೂಟಿಂಗ್ ವೇಳೆ ಕ್ರೇನ್ ಅವಘಡದಲ್ಲಿ ಹಿರಿಯ ಸಾಹಸ ನಿರ್ದೇಶದಕರು ನಿಧನರಾಗಿದ್ದಾರೆ. ಕ್ರೇನ್ ವೈಫಲ್ಯದಿಂದಾಗಿ ಹಿರಿಯ ಸ್ಟಂಟ್ ನಿರ್ದೇಶಕ ಸುರೇಶ್ ನಿಧನರಾಗಿದ್ದಾರೆ. ವಿಜಯ್ ಸೇತುಪತಿ ಅತಿಥಿ ಪಾತ್ರದಲ್ಲಿ ಇರುವ ವಿದುತಲೈ ಸಿನಿಮಾದ ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಕ್ರೇನ್ ಬಳಸಿ ಸುರೇಶ್ ಕೆಲಸ ಮಾಡುತ್ತಿದ್ದರು.

ವಿಜಯ್ ಸೇತುಪತಿ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಅವಘಡ: ಸ್ಟಂಟ್‌ಮ್ಯಾನ್ ಸುರೇಶ್ ಸಾವು | Stuntman Suresh dies after rope accident at the Viduthalai Movie shooting spot - Kannada Filmibeatಕಲಾವಿದರಿಗೆ ಹಗ್ಗ ಕಟ್ಟಿ ಆ ಹಗ್ಗವನ್ನು ಕ್ರೇನ್‌ಗೆ ಕಟ್ಟಲಾಗಿತ್ತು. ಈ ವೇಳೆ ಸುರೇಶ್ ಅವರು ಹಗ್ಗ ಕಟ್ಟಿಕೊಂಡು ಕ್ರೇನ್‌ಗೆ ಹಗ್ಗವನ್ನು ಕಟ್ಟಲಾಗಿತ್ತು. ಕ್ರೇನ್‌ಗೆ ಕಟ್ಟಿದ್ದ ಹಗ್ಗ ತುಂಡಾಗಿ ಸುರೇಶ್ ಕೆಳಕ್ಕೆ ಬಿದ್ದರು ಎನ್ನಲಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೊರ್ವ ಸ್ಟಂಟ್ ಕಲಾವಿದರಿಗೂ ಭಾರೀ ಗಾಯಗಳಾಗಿವೆ.
25  ವರ್ಷಗಳಿಂದ ಸ್ಟಂಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಅವರ ನಿಧನಕ್ಕೆ ಸಿನಿ ಕಲಾವಿದರು ಕಂಬನಿ ಮಿಡಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!