CRIME | ಪ್ರೀತಿಸುವಂತೆ ಯುವಕನಿಂದ ಟಾರ್ಚರ್: ಮನನೊಂದ ಯುವತಿ ಆತ್ಮಹತ್ಯೆಗೆ ಶರಣು

ಹೊಸದಿಂಗತ ಡಿಜಿಟಲ್ ಡೆಸ್ಕ್:

ಯುವತಿಯೊಬ್ಬಳಿಗೆ ತನನ್ನು ಪ್ರೀತಿಸುವಂತೆ ಜನರ ಮುಂದೆ ನಿರಂತರ ಕಿರುಕುಳ ಅವಮಾನ ಅನುಭವಿಸಿದ ಪರಿಣಾಮ ಯುವತಿ ನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಬೇಲೂರಿನ ನಿಡಗೂಡು ಗ್ರಾಮದಲ್ಲಿ ನಡೆದಿದೆ.

ಸಂಗೀತಾ (21) ಆತ್ಮಹತ್ಯೆಗೆ ಮಾಡಿಕೊಂಡ ಯುವತಿ. ಅದೇ ಗ್ರಾಮದ ನಿವಾಸಿ ಶಿವ ಎಂಬವರ ಮಗ ಹೊನಯ್ಯ ಸಂಗೀತಾಗೆ ಪ್ರೀತಿ ವ್ಯಕ್ತಪಡಿಸುತ್ತಿದ್ದ.

ಸಂಗೀತಾ ಜೊತೆ ಮದುವೆಯಾಗುವಂತೆ ತನ್ನ ಹೆತ್ತವರನ್ನು ವಿನಂತಿಸಿದನ್ನು. ಈ ಬಗ್ಗೆ ಸಂಗೀತಾ ಕುಟುಂಬಸ್ಥರು ಈ್ ಮದುವೆಯಾಗುವುದಿಲ್ಲ ಎಂದಿದ್ದಾರೆ. ಆದರೆ, ಶಿವು ಸಂಗೀತಾಳನ್ನು ಪ್ರೀತಿಗಾಗಿ ಪೀಡಿಸಿರುವುದು ಬಹಿರಂಗವಾಗಿದೆ.

ಸಂಗೀತಾ ಅವರು ಜನವರಿ 11 ರಂದು ಬೇಲೂರಿನ ಅಯ್ಯಪ್ಪ ಸ್ವಾಮಿ ದೆವಸ್ಥಾನಕ್ಕೆ ಹೋಗಿದ್ದಳು. ಅದೇ ಸಮಯದಲ್ಲಿ ಶಿವ ಅಲ್ಲಿಗೆ ಬಂದು ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ನನ್ನ ಕರೆಗಳಿಗೆ ಏಕೆ ಉತ್ತರಿಸುವುದಿಲ್ಲ? ನೀನು ನನ್ನನ್ನು ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಜನರ ಮುಂದೆ ಅವಮಾನಿಸಿದ್ದಾರೆ ಎಂದು ಮೃತಳ ಕುಟುಂಬದವರು ಆರೋಪಿಸಿದ್ದಾರೆ.

ಈ ಸಂಬಂಧ ಬೇಲೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಶಿವುನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!