ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದ ಈಶ್ವರಪ್ಪ ಗತಿ ಏನಾಯ್ತು..?, ಡಿಕೆಶಿ

ಹೊಸದಿಗಂತ ವರದಿ ರಾಮನಗರ: 
ಈಶ್ವರಪ್ಪ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದ ಈಶ್ವರಪ್ಪನ ಕತೆ ಏನಾಯ್ತು ಎಂದು ರಾಮನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ. ಅವರು ಈ ಮಾತನ್ನು ಹೇಳಿದಾಗ ನಾನು ವಿಧಾನಸೌಧದಲ್ಲಿ ನಾಲ್ಕು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದೆ ಆಗ ಜೆ.ಪಿ.ನಡ್ಡಾ ಈಶ್ವರಪ್ಪ ನೀಡಿದ ಹೇಳಿಕೆ ತಪ್ಪು ಎಂದು ಹೇಳಿದ್ದರು.

ರಾಮನಗರ ಟೌನ್ ಎಸ್.ಪಿ. ಕಚೇರಿಯ ಮುಂದೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು‌, ಸರ್ಕಾರ ಗುತ್ತಿಗೆದಾರರಿಂದ 40 ಪಸೆ೯ಂಟ್ ಪಡೆದು ಗುತ್ತಿಗೆ ನೀಡುತ್ತದೆ. ಈ ಬಗ್ಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ತಮ್ಮ ಡೆತ್ ನೋಟ್ ನಲ್ಲಿ ಈಶ್ವರಪ್ಪ ಗುತ್ತಿಗೆ ಪಡೆಯಲು 40 ಪಸೆ೯ಂಟ್ ಕೇಳಿದ್ದರು ಎಂದು ಬರೆದಿದ್ದಾರೆ ಇಂತಹ ಘಟನೆಗಳಿಗೆ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಇಂತಹ ಸರ್ಕಾರ ಕಿತ್ತೊಗೆಯಲು ಕಾರ್ಯಕರ್ತರು ಪಣ ತೊಡಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!