ದಿನ ಭವಿಷ್ಯ: ಪ್ರಮುಖ ಕಾರ್ಯವೊಂದರಲ್ಲಿ ಕಾಡಲಿದೆ ದ್ವಂದ್ವ

 

ಮೇಷ
ನಿಮ್ಮ ಕಾರ್ಯದಲ್ಲಿ ಇಂದು ಪೂರ್ಣ ಸ್ವಾತಂತ್ರ್ಯ ಪಡೆಯುವಿರಿ. ಯಾರದೂ ಅಡ್ಡಿಗಳಿಲ್ಲ.  ಆಪ್ತರಿಂದ ಉತ್ತಮ ಸಹಕಾರ, ಬೆಂಬಲ.

ವೃಷಭ
ಆಪ್ತರ ಜತೆಗೆ ಪ್ರವಾಸ ಸಂಭವ. ಎಲ್ಲರ ಸಂಗದಲ್ಲಿ ಸಂತೋಷ ಅನುಭವಿಸುವಿರಿ. ವೃತ್ತಿಯ ಒತ್ತಡಗಳು ಇಂದು ನಿಮ್ಮನ್ನು
ಬಾಸಲಾರವು.

ಮಿಥುನ
ಸಾಮಾಜಿಕ ಕಾರ್ಯ ದಲ್ಲಿ ಹೆಚ್ಚು ಸಕ್ರಿಯ. ನಾಯಕತ್ವ ಗುಣ ಪ್ರಟಿದರ್ಶಿಸುವಿರಿ. ಇತರರು ನಿಮ್ಮ ಮಾರ್ಗದರ್ಶನ ಪಡೆಯುವರು.

ಕಟಕ
ಕಾರ್ಯಸಿದ್ಧಿ. ಉದ್ದೇಶಿಸಿದ ಕೆಲಸ ಕಠಿಣವೆನಿಸಿದರೂ ಕೊನೆಗೆ ಸಫಲ ವಾಗುವುದು.  ವಿದ್ಯಾರ್ಥಿಗಳಿಗೆ ಯಶಸ್ಸು.

ಸಿಂಹ
ಮನೆಯಲ್ಲಿನ ಕಾರ್ಯಗಳಿಗೆ ಹೆಚ್ಚು ಆದ್ಯತೆ ಕೊಡುವಿರಿ. ಕೆಲವು ಅಪೂರ್ಣ ಕಾರ್ಯ ಮುಗಿಸಲು ಯತ್ನಿಸಿ. ಬಂಧುಗಳಿಂದ ಶುಭ ಸುದ್ದಿ.

ಕನ್ಯಾ
ಕೆಲವರ ಕುರಿತಾದ ಪೂರ್ವಗ್ರಹ ಬಿಟ್ಟು ವರ್ತಿಸಿ. ಇಲ್ಲವಾದರೆ ಅವರೊಂದಿಗಿನ ಕಾರ್ಯಕ್ಕೆ ತೊಡಕು ಉಂಟಾದೀತು. ಆರ್ಥಿಕ ಒತ್ತಡ.

ತುಲಾ
ವೃತ್ತಿಯಲ್ಲಿ ಹೆಚ್ಚು ವ್ಯಸ್ತರಾಗುವಿರಿ. ಗುರಿ ಸಾಧಿಸುವ ನಿರ್ವಹಣೆ. ದಿನದಂತ್ಯಕ್ಕೆ ಬಳಲಿಕೆ ಉಂಟಾದರೂ ಮನಸ್ಸಿಗೆ ತೃಪ್ತಿ. ಕೌಟುಂಬಿಕ ಸಮಾಧಾನ.

ವೃಶ್ಚಿಕ
ಅತಿಯಾದ ಕೆಲಸ. ಕಾಲಮಿತಿಯಲ್ಲಿ ಕೆಲಸ ಪೂರೈಸಬೇಕಾದ ಒತ್ತಡ. ಇದರಿಂದಾಗಿ ಕುಟುಂಬದ ಕಡೆ ನಿಮ್ಮ ಗಮನ ಸಾಲದು. ಆ ನಿಟ್ಟಿನಲ್ಲೂ ಗಮನ ಹರಿಸಿ.

ಧನು
ಪ್ರಮುಖ ಕಾರ್ಯವೊಂದರ ಕುರಿತು ದ್ವಂದ್ವ ಕಾಡುವುದು. ಯೋಚಿಸಿ ಮುಂದಿನ ಹೆಜ್ಜೆಯಿಡಿ. ಆಪ್ತರ ಸಲಹೆ ಸೂಚನೆ ಪಡೆಯಿರಿ.

ಮಕರ
ಹಣಕಾಸು ವ್ಯವಹಾರ ದಲ್ಲಿ ನಿಮಗೆ ಪೂರಕ ಬೆಳವಣಿಗೆ. ಆತಂಕ ನಿವಾರಣೆ. ಹೊಸ ವಸ್ತು ಖರೀದಿ ಅವಕಾಶ. ಬಂಧುಗಳಿಂದ ಉತ್ತಮ ಪ್ರತಿಸ್ಪಂದನೆ.

ಕುಂಭ
ಕೆಲಸದ ಒತ್ತಡ ಅಕ. ಮನಶ್ಯಾಂತಿ ಕದಡುವ ಬೆಳವಣಿಗೆ ಸಂಭವಿಸಬಹುದು. ಇದರಿಂದ ಕೌಟುಂಬಿಕ ಪರಿಸರದ ಮೇಲೂ ಪರಿಣಾಮ.

ಮೀನ
ಗ್ರಹಗತಿಗಳು ನಿಮಗೆ ಪೂರಕವಾಗಿವೆ. ಬಯಸಿದ ಕಾರ್ಯ ಈಡೇರುವುದು. ನಿಮ್ಮ ಇಷ್ಟದ ವ್ಯಕ್ತಿಯಿಂದ ಪೂರಕ ಪ್ರತಿಸ್ಪಂದನೆ ಪಡೆಯುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!